ಬೆಂಗಳೂರು, ಜೂ. 19: ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿಗಳು ಜೈಲು ಸಿಬ್ಬಂದಿಗೆ ಲಂಚ ಕೊಡುವ ವಿಡಿಯೋ ವೈರಲ್ ಆಗಿದೆ. ವಿಚಾರಣಾಧೀನ ಖೈದಿಗಳೇ ಲಂಚದ ವಿಡಿಯೋ ಮಾಡಿದ್ದಾರೆ ಎಂಬ ಸಂಶಯವಿದೆ. ವಿಡಿಯೋದಲ್ಲಿ ಮಂಜುನಾಥ್ ಕಡೂರು ಪರವಾಗಿ ಲಂಚ ಸ್ವೀಕರಿಸುತ್ತಿರುವ ಸಿಬ್ಬಂದಿಯ ಚಿತ್ರಣವಿದೆ.
ವಿಐಪಿ ಸೆಲ್ನಲ್ಲಿ ಇರೋ ಖೈದಿಗಳು ಲಂಚ ಕೊಟ್ಟರಷ್ಟೇ ಸೇಫ್ ಇಲ್ಲದಿದ್ರೆ ಸಾಮಾನ್ಯ ರೂಂಗೆ ವರ್ಗಾಯಿಸಿಬಿಡುತ್ತಾರೆ. ವಾರಕ್ಕೆ ೩-೫ ಸಾವಿರ ಲಂಚ ಕೊಡಬೇಕು. ಲಂಚ ಕೊಟ್ಟು ಹೈರಾಣಾಗಿದ್ದ ವಿಚಾರಣಾಧೀನ ಖೈದಿಗಳು ಈ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಮೊನ್ನೆಯಷ್ಟೇ ತೀವ್ರ ಜ್ವರದಿಂದ ಬಳಲುತ್ತಿದ್ದ ವಿಚಾರಣಾಧೀನ ಖೈದಿ ಅಮೀರ್ಗೆ ಚಿಕಿತ್ಸೆ ಕೊಡಿಸಲು ಜೈಲು ಸಿಬ್ಬಂದಿ ಲಂಚ ಕೇಳಿದ್ದರು. ಸಿಬ್ಬಂದಿಗೆ ಹಣ ಕೊಡದಿದ್ದರಿಂದ ಚಿಕಿತ್ಸೆ ಕೊಡಿಸದ ಕಾರಣ ಅಮೀರ್ ಸಾವನ್ನಪ್ಪಿದ್ದಾನೆ. ರೊಚ್ಚಿಗೆದ್ದ ಖೈದಿಗಳಿಂದ ಊಟ ಬಿಟ್ಟು ನಿನ್ನೆ ಪ್ರತಿಭಟನೆ ನಡೆಸಿದ್ದರು. ಗೃಹ ಮಂತ್ರಿಗಳು ಖುದ್ದು ಬಂದು ಸಮಸ್ಯೆ ಬಗೆಹರಿಸಬೇಕೆಂದು ಅಕ್ರೋಶ ವ್ಯಕ್ತಪಡಿಸಿದ್ದರು. ಸಚಿವರು ಈಗಲಾದರೂ ಇತ್ತ ಗಮನಹರಿಸಿ ವ್ಯವಸ್ಥೆಯನ್ನು ಸುಧಾರಿಸಬೇಕಿದೆ.