ಹೊಸಕೋಟೆ, ಜು. 13 : ವಸತಿ ಸಚಿವ ಎಮ್ ಟಿ ಬಿ ನಾಗರಾಜ್ ರವರು ಹೊಸಕೋಟೆ ನಗರದ ಪರಿವೀಕ್ಷಣಾ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗುಪ್ತ ಸಭೆ ಮುಗಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದು ಮುಂದಿನ ನಡೆ ಯಾವುದೇ ಕಾರಣಕ್ಕೂ ಪಕ್ಷ ಬದಲಾಯಿಸಲ್ಲ ತಾಲ್ಲೂಕಿನ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು.
ಬಚ್ಚೇಗೌಡರು ನಾನು ಬಿಜೆಪಿಗೆ ಹೋದರೆ ಯಾವುದೇ ಅಭ್ಯಂತರ ಇಲ್ಲ ಅಂತ ಹೇಳಿದಾರೆ. ಆದರೆ ನಾನು ಯಾರಿಗೂ ಎಲ್ಲೂ ಬಿಜೆಪಿಗೆ ಹೋಗುತೀನಿ ಅಂತ ಹೇಳಿಲ್ಲ.
ಸಮಯ ಸಂಧರ್ಭಕ್ಕೆ ಪರಿಸ್ಥಿತಿಗೆ ಅನುಗುಣವಾಗಿ ರಾಜೀನಾಮೆ ನೀಡಿದ್ದೇನೆ. ನಿವೃತ್ತಿ ಪಡಿಬೇಕು ಅಂತ ರಾಜೀನಾಮೆ ಕೊಟ್ಟಿದ್ದೆ ಕಾದು ನೋಡಿ, ತಾಲ್ಲೂಕಿನ ಒಳಿತಿಗಾಗಿ ರಾಜೀನಾಮೆ ನೀಡಿದ್ದೇನೆ ಕಾರ್ಯಕರ್ತರ ಅಭಿಮತ ಪಡೆದಡ ನನ್ನ ಮುಂದಿನ ನಿಲುವು ಎಂದು ತಿಳಿಸಿದರು.