ಬೆಂಗಳೂರು, ಜು. 24 : ಮನೆಯ ಮುಂದೆ ಕುಳಿತಿದ್ದ ವೃದ್ಧೆಗೆ ಜ್ಯೂಸ್ ಕೊಟ್ಟ ದುಷ್ಕರ್ವಿುಯೊಬ್ಬ ಆಕೆಯ ಚಿನ್ನಾಭರಣ ದೋಚಿದ್ದಾನೆ.
ಜೆ.ಪಿ. ನಗರ 6ನೇ ಹಂತದ ನಿವಾಸಿ ಪಾಪಮ್ಮ(85) ವಂಚನೆಗೆ ಒಳಗಾದವರು. ಶನಿವಾರ (ಜೂ. 22) ಮಧ್ಯಾಹ್ನ 1.30ರಲ್ಲಿ ಮನೆಯ ಮುಂದೆ ಪಾಪಮ್ಮ ಒಬ್ಬರೇ ಕುಳಿತಿದ್ದರು. ಅಲ್ಲಿಗೆ ಅಪರಿಚಿತ ವ್ಯಕ್ತಿ ಬಂದು ಕುಡಿಯಲು ಜ್ಯೂಸ್ ಕೊಟ್ಟಿದ್ದಾನೆ. ಜ್ಯೂಸ್ ಸೇವಿಸುತ್ತಿದ್ದಂತೆ ವೃದ್ಧೆ ಪ್ರಜ್ಞೆ ತಪ್ಪಿದ್ದು ಮೈಮೇಲಿದ್ದ 40 ಗ್ರಾಂ ಮಾಂಗಲ್ಯ ಸರ, 2 ಬಳೆ, 2 ಉಂಗುರ ದೋಚಿದ್ದಾನೆ. ಸ್ವಲ್ಪ ಸಮಯದ ಬಳಿಕ ಪಾಪಮ್ಮ ಎದ್ದು ನೋಡಿದಾಗ ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿದೆ. ಜ್ಯೂಸ್ ಕೊಟ್ಟ ವ್ಯಕ್ತಿಯೇ ಆಭರಣ ದೋಚಿದ್ದಾನೆ ಎಂದು ಪಾಪಮ್ಮ ದೂರು ನೀಡಿದ್ದಾರೆ. ಆರೋಪಿ ಬಂಧನಕ್ಕೆ ಬಲೆಬೀಸಿರುವುದಾಗಿ ಪುಟ್ಟೇನಹಳ್ಳಿ ಪೊಲೀಸರು ತಿಳಿಸಿದ್ದಾರೆ.