ಹನೂರು: ಸ್ವಂತ ವ್ಯವಹಾರ ಮಾಡಿಕೊಂಡಿದ್ದು ಸಮಾಜದಲ್ಲಿ ಒಂದು ಉತ್ತಮ ಹೆಸರು ಗಳಿಸಬೇಕೆಂಬ ಮಹದಾಸೆಯಿಂದ ಪತ್ರಿಕರಂಗಕ್ಕೆ ಪಾದಾರ್ಪಣೆ ಮಾಡಿ ಬೆಳೆಯುತ್ತಿರುವಾಗಲೆ ಮೃತಪಟ್ಟ ಸ್ನೇಹಿತ ಮಲ್ಲ ಅವರ ಕುಟುಂಬಕ್ಕೆ ದೇವರು ಶಾಂತಿ ನೀಡಲಿ ಎಂದು ಹನೂರಿನ ಪತ್ರಿಕ ಬಳಗ ದೇವರಲ್ಲಿ ಪ್ರಾರ್ಥಿಸಿದರು
ಇವರು ಚಾಮರಾಜನಗರ ಪಬ್ಲಿಕ್ ವಾಯ್ಸ್ ದಿನ ಪತ್ರಿಕೆಯ ಹನೂರು ತಾಲ್ಲೂಕು ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಲ್ಲ ಮಾದೇಶ(೩೮) ಅಕಾಲಿಕ ಮರಣ ಹೊಂದಿದ್ದು ಮೃತರು ತಂದೆ ತಾಯಿ ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಶಾಸಕ ಆರ್.ನರೇಂದ್ರ ರಾಜೂಗೌಡ ಮತ್ತು ಬಿಜೆಪಿ ಜಿಲ್ಲಾ ಮುಖಂಡ ಡಾ.ದತ್ತೇಶ್ ಕುಮಾರ್ ಅಂತಿಮ ದರ್ಶನ ಪಡೆದರು. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿಲಾಯಿತ್ತು.