ಅಂತೂ ಇಂತೂ ‘ಜೋಡೆತ್ತು’ ಟೈಟಲ್ ಫಿಕ್ಸ್.!

ಅಂತೂ ಇಂತೂ ‘ಜೋಡೆತ್ತು’ ಟೈಟಲ್ ಫಿಕ್ಸ್.!

ಬೆಂಗಳೂರು, ಮೇ. 14, ನ್ಯೂಸ್ ಎಕ್ಸ್  ಪ್ರೆಸ್: 2019ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಮಂಡ್ಯದಲ್ಲಿ ಕೇಳಿಬಂದ ಕೆಲವೊಂದು ಪದಗಳು ತುಂಬಾ ಪೇಮಸ್ ಆಗಿಬಿಟ್ಟಿವೆ. ಅದರಲ್ಲಿ ನಿಖಿಲ್ ಎಲ್ಲಿದೀಯಪ್ಪ, ಜೋಡೆತ್ತು, ಕಳ್ಳೆತ್ತು ಎನ್ನುವ ಪದಗಳು ಹಾಗಾಗ ಕೇಳಿ ಬರುತ್ತಿದ್ದವು. ಇದೀಗ ಆ ಪದಗಳೇ ಸಿನಿಮಾ ಟೈಟಲ್ ಆಗುತ್ತಿವೆ. ಅಷ್ಟೆ ಅಲ್ಲದೇ ಆ ಎರಡು ಟೈಟಲ್ ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಕೂಡ ಆಗಿತ್ತು..

ದರ್ಶನ್ ಕ್ಯಾಂಪೇನ್ ಮಾಡುವ ಸಮಯದಲ್ಲಿ ಜೋಡೆತ್ತು ಎನ್ನುವ ಪದ ಅವರ ಬಾಯಿಂದ ಬಂತೋ ಅವಾಗಿನಿಂದ ಜೋಡೆತ್ತು ಎನ್ನುವ ಪದ ಟ್ರೆಂಡ್ ಕ್ರಿಯೆಟ್ ಮಾಡಿತ್ತು.  ಹೌದು ಈ ಹೆಸರಿನ ಚಿತ್ರವನ್ನು ಮಾಡಲು ಅನೇಕ ನಿರ್ಮಾಪಕರು ಅಂದು ಕೊಂಡರು ಕೂಡ ಆ ಟೈಟಲ್ ಇದೀಗ ನಿರ್ಮಾಪಕ ಎಂ.ಜಿ.ರಾಮಮೂರ್ತಿಯವ ಪಾಲಿಗೆ ದಕ್ಕಿದೆ. ದರ್ಶನ್ ಮತ್ತು ನಿರ್ಮಾಪಕ ಎಂ.ಜಿ.ರಾಮಮೂರ್ತಿಯವರಿಗೆ ಒಳ್ಳೆ ಬಾಂಧವ್ಯವಿದೆ. ದರ್ಶನ್ ಹೀರೋ ಆಗಿ ನಟಿಸಿದ ಮೊದಲ ಚಿತ್ರ ಮೆಜೆಸ್ಟಿಕ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದವರು ಇದೇ ರಾಮಮೂರ್ತಿಯವರು.

ಮತ್ತೆ ಈ ನಿರ್ಮಾಪಕ ಮತ್ತು ನಟರು ಒಂದಾಗಲಿಲ್ಲ. ಆದರೆ ಯಾವಾಗ ಮೆಜೆಸ್ಟಿಕ್ ಬಂದು 15 ವರ್ಷ ಆಯ್ತೋ ಆಗಲೇ ಮತ್ತೊಮ್ಮೆ ಇಬ್ಬರು ಒಂದಾಗಿ ಕೆಲಸ ಮಾಡುವ ಮನಸು ಮಾಡಿದರು. ಈಗ ಆ ಕಾಲ ಮತ್ತೆ ಸನಿಹವಾಗುವ ಲಕ್ಷಣಗಳು ಕಾಣಿಸುತ್ತಿವೆ. ಈಗಾಗಲೇ ಕಥೆ ಸಿದ್ದವಾಗಿದ್ದು ದರ್ಶನ್ ಮತ್ತು ಯಶ್ ಒಟ್ಟಿಗೆ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರ ಎಂಬುದೇ ಸದ್ಯದ ಪ್ರಶ್ನೆ. 1 ವೇಳೆ ಯಶ್ ದರ್ಶನ್ ಅವರ ತಮ್ಮನ ಪಾತ್ರವನ್ನು ಮಾಡುತ್ತಾರ ಅನ್ನೋದು ಮತ್ತೊಂದು ಪ್ರಶ್ನೆ.

ಫ್ರೆಶ್ ನ್ಯೂಸ್

Latest Posts

Featured Videos