ರಮೇಶ್ ಜಿಗಜಿಣಗಿಗೆ ವಕೀಲನಿಂದ ತರಾಟೆ…

ರಮೇಶ್ ಜಿಗಜಿಣಗಿಗೆ ವಕೀಲನಿಂದ ತರಾಟೆ…

ವಿಜಯಪುರ, ಏ. 10, ನ್ಯೂಸ್ ಎಕ್ಸ್ ಪ್ರೆಸ್: ಮತ ಯಾಚಿಸಲು ರಮೇಶ್​ ಜಿಗಜಿಣಗಿ ಆಗಮಿಸಿದ್ದರು, ಈ ವೇಳೆ ಅವರ ಮೇಲೆ ವಕೀಲನೋರ್ವ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಎರಡು ಬಾರಿ ಸಂಸದರಾದ ನೀವು ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೇಂದ್ರ ಸಚಿವ ಜಿಗಜಿಣಗಿ ತಬ್ಬಿಬ್ಬಾಗಿದ್ದಾರೆ. ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ರಮೇಶ್​ ಜಿಗಜಿಣಗಿಗೆ ಮತಯಾಚನೆ ವೇಳೆ ವಕೀಲನೋರ್ವ ಫುಲ್​ ಕ್ಲಾಸ್ ತೆಗೆದುಕೊಂಡ ಘಟನೆ ನಗರದ ಜಿಲ್ಲಾ ನ್ಯಾಯವಾದಿಗಳ ಸಂಘದ ಸಭಾಭವನದಲ್ಲಿ ನಡೆದಿದೆ. ನ್ಯಾಯವಾದಿಗಳ ಸಭಾ ಭವನದಲ್ಲಿ ಮತಯಾಚಿಸಲು ರಮೇಶ್​ ಜಿಗಜಿಣಗಿ ಆಗಮಿಸಿದ್ದರು. ಈ ವೇಳೆ ಅವರ ಮೇಲೆ ವಕೀಲರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಎರಡು ಬಾರಿ ಸಂಸದರಾದ ನೀವು ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ವಕೀಲ ತಿಪ್ಪಣ್ಣ ದೊಡ್ಡಮನಿ ಪ್ರಶ್ನಿಸಿದ್ದಾರೆ. ತಿಪ್ಪಣ್ಣರನ್ನ ಇತರೆ ವಕೀಲರು ಸಮಾಧಾನಪಡಿಸಲು ಮುಂದಾಗಿ ನಂತರ ಅವರನ್ನು ಸಭಾ ಭವನದಿಂದ ಹೊರಗೆ ಕರೆದೊಯ್ದರು. ಈ ವೇಳೆ ಮುಜುಗರಕ್ಕೀಡಾದ ರಮೇಶ್​ ಜಿಗಜಿಣಗಿ, ಸ್ಥಳದಿಂದ ಕಾಲ್ಕಿತ್ತರು.

ಫ್ರೆಶ್ ನ್ಯೂಸ್

Latest Posts

Featured Videos