ಶ್ರೀಲಂಕಾ ಬಾಂಬ್ ಬ್ಲಾಸ್ಟ್: ಜೆಡಿಎಸ್ ಮುಖಂಡರ ಸಾವು

ಶ್ರೀಲಂಕಾ ಬಾಂಬ್ ಬ್ಲಾಸ್ಟ್: ಜೆಡಿಎಸ್ ಮುಖಂಡರ ಸಾವು

ಬೆಂಗಳೂರು, ಏ. 22, ನ್ಯೂಸ್ ಎಕ್ಸ್ ಪ್ರೆಸ್: ಶ್ರೀಲಂಕಾದ ನಡೆದಿರುವ ಸರಣಿ ಬಾಂಬ್​ ಸ್ಫೋಟ ಪ್ರಕರಣದಲ್ಲಿ ಕರ್ನಾಟಕದ ಇಬ್ಬರು ಜೆಡಿಎಸ್​ ಮುಖಂಡರು ಸಾವನ್ನಪ್ಪಿದ್ದು, ಈ ವಿಷಯವನ್ನ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಸ್ಪಷ್ಟ ಪಡಿಸಿದೆ. ಜೆಡಿಎಸ್​ ಮುಖಂಡರಾದ ಕೆಜೆ ಹನುಮಂತರಾಯಪ್ಪ ಹಾಗೂ ಎಂ ರಂಗಪ್ಪ ಬಾಂಬ್​ ಬ್ಲಾಸ್ಟ್​​ನಲ್ಲಿ ಸಾವನ್ನಪ್ಪಿದ್ದಾಗಿ ಖಚಿತ ಪಡಿಸಿದೆ. ಹೀಗಾಗಿ ಘಟನೆಯಲ್ಲಿ ಭಾರತೀಯರ ಸಾವಿನ ಸಂಖ್ಯೆ 7ಕ್ಕೇರಿಕೆಯಾಗಿದೆ.

ರಾಜ್ಯದ ಏಳು ಜೆಡಿಎಸ್ ಮುಖಂಡರು ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ಉಳಿದಂತೆ ಐವರು ಕಾಣೆಯಾಗಿದ್ದಾಗಿ ತಿಳಿದು ಬಂದಿದೆ. ಘಟನೆಯಲ್ಲಿ ಇಲ್ಲಿಯವರಗೆ 290 ಜನರು ಸಾವನ್ನಪ್ಪಿದ್ದು, 500 ಮಂದಿ ಗಾಯಗೊಂಡಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಆಘಾತ ವ್ಯಕ್ತಪಡಿಸಿದ್ದು, ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಜತೆ ತಾವೂ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos