ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಧೈರ್ಯ ಇದ್ದರೆ ಒಂದಾಗಿಟ್ಟುಕೊಳ್ಳಲಿ: ಬಿಎಸ್ ವೈ

ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಧೈರ್ಯ ಇದ್ದರೆ ಒಂದಾಗಿಟ್ಟುಕೊಳ್ಳಲಿ: ಬಿಎಸ್ ವೈ

ಕಲಬುರ್ಗಿ, ಮೇ. 13 ನ್ಯೂಸ್ ಎಕ್ಸ್ ಪ್ರೆಸ್: ಧೈರ್ಯ ಇದ್ದರೆ ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಒಗ್ಗೂಡಿಸಿ ಇಟ್ಟುಕೊಳ್ಳಲಿ. ಅವರೇ ಕಿತ್ತಾಡಿಕೊಂಡರೆ ನಾವೇನು ಮಾಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ. ರಾಜ್ಯದಲ್ಲಿ ಬರಗಾಲ ಇದೆ, ಸರ್ಕಾರ ಸತ್ತಿದೆಯೋ ಬದುಕಿದೆಯೋ ಎಂಬ ಭಾವನೆ ಜನರಲ್ಲಿದೆ.  ನಗರದಲ್ಲಿ ಮಾತನಾಡಿದ ಅವರು, ನಾನೆಲ್ಲಾದರೂ ಮುಖ್ಯಮಂತ್ರಿ ಆಗ್ತೇನೆ ಅಂತಾ ಹೇಳಿದ್ದೇನಾ? ಮೇ 23ರ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ದಾಟಲ್ಲ ಅಂತಾ ಅವರಿಗೆ ಮನವರಿಕೆ ಆಗಿದೆ ಎಂದು ಹರಿಹಾಯ್ದರು.

ಪ್ರಧಾನಿ ಬಗ್ಗೆ ಮಾತನಾಡಿದ್ರೆ ದೊಡ್ಡವರಾಗುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ಮುಖಂಡರು ಹಾಗೂ ಮಲ್ಲಿಕಾರ್ಜುನ ಖರ್ಗೆಗೆ ಪ್ರಧಾನಿ ಬಗ್ಗೆ ಕೀಳಾಗಿ ಮಾತನಾಡೋದು ರೂಢಿಯಾಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಸಿದ್ದರಾಮಯ್ಯ ವಿರುದ್ಧ ಕೊಟ್ಟ ಹೇಳಿಕೆ ಕೇವಲ ವಿಶ್ವನಾಥ್ ಅವರ ಹೇಳಿಕೆಯಲ್ಲ. ಕುಮಾರಸ್ವಾಮಿ ಹೇಳಬೇಕೆಂದಿದ್ದನ್ನು ವಿಶ್ವನಾಥ ಮೂಲಕ ಹೇಳಿಸಿದ್ದಾರೆ. ಉಪಚುನಾವಣೆ ಫಲಿತಾಂಶ ಬಳಿಕ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಬರುವ ಸಾಧ್ಯತೆ ಹೆಚ್ಚಿದೆ ಎಂದರು.

ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿಎಸ್ವೈ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಿಜೆಪಿ ಅಡ್ಡಿ ಮಾಡ್ತಿದೆ ಎಂದು  ಸಿದ್ದರಾಮಯ್ಯ ಹೇಳಿದ ಮಾತನ್ನ ಖಂಡಿಸಿದ್ದಾರೆ.ನಮ್ಮ ದೇಶದ ಪ್ರಧಾನಿಯಾದವರೇ ಅತೀ ಹಿಂದುಳಿದ ಜಾತಿಯವರಾಗಿದ್ದಾರೆ . ಕುಂದಗೋಳ, ಚಿಂಚೋಳಿ ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಬಹಳ ಅಂತರದಿಂದ ಗೆಲ್ತಾರೆ ಅಂತಾ ಬಿಎಸ್ ವೈ

ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos