“ಜಾತಿ ರಾಜಕಾರಣ ಶೋಭೆ ತರುವುದಿಲ್ಲ” ಶೃತಿ

“ಜಾತಿ ರಾಜಕಾರಣ ಶೋಭೆ ತರುವುದಿಲ್ಲ” ಶೃತಿ

ಉಡುಪಿ, ಏ. 5, ನ್ಯೂಸ್ ಎಕ್ಸ್ ಪ್ರೆಸ್: ಜಾತಿ ರಾಜಕೀಯ ಮಾಡಿದ್ರೆ ಶೋಭೆ ತರಲ್ಲ. ವಿರೋಧ ಪಕ್ಷದ ಜಾತಿ ರಾಜಕಾರಣ ಬೇಸರ ತಂದಿದೆ ಎಂದು ನಟಿ ಶೃತಿ ಉಡುಪಿಯಲ್ಲಿ ಹೇಳಿದ್ದಾರೆ. ಜಾತಿ ಆಧಾರದ ಮೇಲೆ ರಾಜಕಾರಣ ಮಾಡಬಾರದು ಎನ್ನುವವರೇ ಜಾತಿ ರಾಜಕೀಯ ಮಾಡಿದ್ರೆ ಶೋಭೆ ತರಲ್ಲ. ವಿರೋಧ ಪಕ್ಷದ ಜಾತಿ ರಾಜಕಾರಣ ಬೇಸರ ತಂದಿದೆ ಎಂದು ನಟಿ ಶೃತಿ ಉಡುಪಿಯಲ್ಲಿ ಹೇಳಿದ್ದಾರೆ. ಸುಮಲತಾ, ದರ್ಶನ್, ಯಶ್ ಯಾರು ಕೂಡ ಜಾತಿ ಆಧಾರದ ಮೇಲೆ ಮತ ಕೇಳಿಲ್ಲ. ಜಾತಿ ಆಧಾರದ ಮೇಲೆ ಮತ ಕೇಳಿದವರಿಗೆ ಜನತೆ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ. ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತಯಾಚನೆ ನಡೆಸಿದ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಸುಮಲತಾ ಅವರ ವೈಯಕ್ತಿಕ ಟೀಕೆ ಸರಿಯಲ್ಲ. ಎಲ್ಲಾ ಟೀಕೆಯನ್ನು ಸುಮಲತಾ ಪ್ರಬುದ್ಧತೆಯಿಂದ ಸ್ವೀಕರಿಸಿದ್ದಾರೆ. ಕರ್ನಾಟಕದಲ್ಲಿ 28ಕ್ಕೆ 28 ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos