ಎಂ.ಎಲ್.ಎ ಹಾಗೂ ಜಿ.ಪಂ ಸದಸ್ಯರ ನಡುವೆ ಜಟಾಪಟಿ

ಎಂ.ಎಲ್.ಎ ಹಾಗೂ ಜಿ.ಪಂ ಸದಸ್ಯರ ನಡುವೆ ಜಟಾಪಟಿ

ನೆಲಮಂಗಲ, ನ. 05: ನೀರಿನ ಕಾಮಗಾರಿ ವಿಚಾರದಲ್ಲಿ ರಾಜಕೀಯ ಒಣ ಪ್ರತಿಷ್ಟೆ, ಎಂ.ಎಲ್.ಎ ಹಾಗೂ ಜಿ.ಪಂ ಸದಸ್ಯರ ನಡುವೆ ಜಟಾಪಟಿ, ನೀರಿನ ಸಮಸ್ಯೆ ಇಲ್ಲದಿದ್ದರೂ ರಾಜಕೀಯ ಕಾರಣಕ್ಕೆ ಮತ್ತೊಂದು ಕಾಮಗಾರಿ.

ಆ ಗ್ರಾಮಕ್ಕೆ ಸಮರ್ಪಕ ನೀರು ಸರಬರಾಜು ಮಾಡಲು ಸ್ಥಳೀಯ ಶಾಸಕರ ಅನುದಾನದಲ್ಲಿ ಈಗಾಗಲೇ ನೀರನ್ನು ಪೂರೈಸುವ ಘಟಕ ಸ್ಥಾಪಿಸಲಾಗಿದೆ. ಹೀಗಿದ್ದರೂ ಇದೀಗ ಜಿಲ್ಲಾ ಪಂಚಾಯತ ಸದಸ್ಯರ ತಮ್ಮ ರಾಜಕೀಯ ಒಣ ಪ್ರತಿಷ್ಠೆ ಹಾಗೂ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಇದೇ ಗ್ರಾಮದಲ್ಲಿ ಅನವಶ್ಯಕವಾಗಿ ಮತ್ತೊಂದು ನೀರಿನ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ.

ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಭಟ್ಟರಹಳ್ಳಿ ಗ್ರಾಮದಲ್ಲಿ ಈಗಾಗಲೇ ಶಾಸಕ ಶ್ರೀನಿವಾಸ ಮೂರ್ತಿ ಅನುದಾನ ದಲ್ಲಿ ಗ್ರಾಮಕ್ಕೆ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಇದೀಗ ಗ್ರಾಮ ಪಂಚಾಯತಿ ಚುನಾವಣಾ ಸಮೀಪಿಸುತ್ತಿದ್ದಂತೆ ಎಚ್ಚೆತ್ತಿರುವ ಜಿಲ್ಲಾ ಪಂಚಾಯತ ಸಸಸ್ಯೆ ಪುಷ್ಪಾ ಸಂಪತ್ ನೀರಿನ ಸಮಸ್ಯೆ ಇಲ್ಲದಿದ್ದರೂ ಅದೇ ಗ್ರಾಮದಲ್ಲಿ ಮತ್ತೊಂದು ನೀರಿನ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ. ಒಟ್ಟಾರೆ ರಾಜಕೀಯ ನಾಯಕರ ಕಿತ್ತಾಟದಿಂದ ಗ್ರಾಮಸ್ಥರಿಗೆ ಮಾತ್ರ ನೀರಿನ ಸಮಸ್ಯೆ ನಿಗಿದೆ.

ಫ್ರೆಶ್ ನ್ಯೂಸ್

Latest Posts

Featured Videos