ತೆಕ್ಕಟ್ಟೆ, ಅ. 3 : ಗಾಂಧಿ ಜಯಂತಿಯಂದು ಜನಿಸಿದ ಕರುಗಳಿಗೆ ಗಾಂಧಿ – ಜಯಂತಿ ಎಂದು ಹೆಸರಿಟ್ಟು ದೇಶ ಪ್ರೇಮ ಮೆರೆದ ಘಟನೆ ಉಡುಪಿ ಜಿಲ್ಲೆಯ ತೆಕ್ಕಟೆಯಲ್ಲಿ ನಡೆದಿದೆ.
ಇಲ್ಲಿನ ಮಣೂರು ದೇವಸ ದೊಡ್ಮನೆ ಕಮಲ ಶೆಡ್ತಿ ಅವರ ಮನೆಯಲ್ಲಿ ಅವರ ದನವೊಂದು ಅ.2 ರಂದು ಒಂದು ಗಂಡು ಹಾಗೂ ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಕರುಗಳಿಗೆ ಗಾಂಧಿ ಹಾಗೂ ಜಯಂತಿ ಎಂದು ಹೆಸರಿಡಲಾಗಿದೆ ಎಂದು ಸಂತೋಷ ಶೆಟ್ಟಿ ತಿಳಿಸಿದ್ದಾರೆ.