ಜನಸ್ಪಂದನಾ ರತ್ನ 2023 ಪ್ರಶಸ್ತಿ ಪ್ರಧಾನ ಸಮಾರಂಭ!

ಜನಸ್ಪಂದನಾ ರತ್ನ 2023 ಪ್ರಶಸ್ತಿ ಪ್ರಧಾನ ಸಮಾರಂಭ!

ಬೆಂಗಳೂರು: ಕರುನಾಡ ಜನಸ್ಪಂದನಾ ವೇದಿಕೆಯ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವೇದಿಕೆಯ ರಾಜ್ಯಧ್ಯಕ್ಷರಾದ ನಟರಾಜ್ ಬಿ.ಪಿ ರವರ ನೇತೃತ್ವದಲ್ಲಿ ಜನಸ್ಪಂದನಾ ರತ್ನ 2023 ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಗರದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಬೆಂಗಳೂರಿನ ಗಂಡಸಿ ಸದಾನಂದ ಸ್ವಾಮಿ ರವರು ಹಾಗೂ ಖ್ಯಾತ ಚಲನಚಿತ್ರ ನಟರಾದ ಗಣೇಶ್ ರಾವ್ ಕೆ ಸರ್ಕಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹೇಂದ್ರ ಬಿ ಎ, ಲಯನ್ ಮನೋಜ್ ಕುಮಾರ್, ಲಯನ್ ಎಂ.ಎಸ್. ರಾಮಕೃಷ್ಣಪ್ಪ, ನಿವೃತ್ತ ಯೋಧರಾದ ಕುಮಾರಸ್ವಾಮಿ.

ಖ್ಯಾತ ಚಲನಚಿತ್ರ ನಟರಾದ ಭಾಗ್ಯಶ್ರೀ, ಜಿ.ಚಂದ್ರಶೇಖರ್, ನಕಿರೇಕಂಟೆ ಸ್ವಾಮಿ, ವೇದಿಕೆಯ ರಾಜ್ಯಾಧ್ಯಕ್ಷರಾದ ನಟರಾಜ್ ಬಿ ಪಿ, ಉಪಾಧ್ಯಕ್ಷರಾದ ಮಹೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಮಧು ಎನ್ ಗೌಡ,  ಸೇರಿದಂತೆ ಇತರರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos