ಬೆಂಗಳೂರು, ಸೆ. 18: ಮಾಜಿ ಸಚಿವ, ಕಾಂಗ್ರೆಸ್ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಜಾನಮೀನು ಅರ್ಜಿ ವಿಚಾರಣೆಯನ್ನು ಇಂದು ಇಡಿ ವಿಶೇಷ ನ್ಯಾಯಾಲಯ ನಡೆಸಲಿದೆ.
ಡಿಕೆಶಿ ಅವರು ಕಳೆದ 14 ದಿನಗಳಿಂದ ಡಿಕೆಶಿ ಇಡಿ ವಿಚಾರಣೆಗೆ ಒಳಪಟ್ಟಿದ್ದರು. ಆದರೆ ಶಿವಕುಮಾರ್ 2ನೇ ಬಾರಿ ಕಸ್ಟಡಿಗೆ ಬಂದಾಗ ಅವರು ಆಸ್ಪತ್ರೆಯಲ್ಲೇ ಇದ್ದರು. ಹೀಗಾಗಿ ಪರಿಣಾಮಕಾರಿ ವಿಚಾರಣೆ ಮಾಡಲು ಸಾಧ್ಯವಾಗಿಲ್ಲ. ವೈದ್ಯರ ಪ್ರಮಾಣಪತ್ರವನ್ನು ಕೋರ್ಟಿಗೆ ಸಲ್ಲಿಸುತ್ತಿದ್ದೇವೆ. ಕಸ್ಟಡಿ ಅವಧಿ ವೇಳೆ ಮುಖಾಮುಖಿ ವಿಚಾರಣೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ನ್ಯಾಯಾಂಗ ಬಂಧನದಲ್ಲಿ ವಿಚಾರಣೆ ಮಾಡಬೇಕಾದ ಅಗತ್ಯವಿದೆ. ಇನ್ನೂ ಒಬ್ಬರಿಗೆ ಸಮನ್ಸ್ ನೀಡಬೇಕಾಗಿದೆ. ಅವರೊಂದಿಗೆ ಡಿಕೆಶಿಯನ್ನು ಮುಖಾಮುಖಿ ವಿಚಾರಣೆ ಮಾಡಬೇಕಿದೆ. ನ್ಯಾಯಾಂಗ ಬಂಧನದಲ್ಲಿ ವಿಚಾರಣೆ ನಡೆಸಲು ಇಡಿಗೆ ಅನುಮತಿ ಕೊಡಿ. ಡಿಕೆಶಿ ಆರೋಗ್ಯದ ಬಗ್ಗೆ ಇಡಿ ನಿಗಾ ವಹಿಸಲಿದೆ. ಅಗತ್ಯ ಚಿಕಿತ್ಸೆ ಕೊಡಿಸಲಿದೆ ಎಂದು,” ನಾಗರಾಜ್ ಹೇಳಿದ್ದರು.