ಬಾಗಲಕೋಟೆ, ಅ. 23 : ಜಿಲ್ಲೆಯ ಐತಿಹಾಸಿಕ ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಮಲಪ್ರಭಾ, ಕೃಷ್ಣಾ ಹಾಗೂ ಘಟಪ್ರಭಾ ನದಿ ನೀರಿನಿಂದ ಜಲಾವೃತಗೊಂಡಿದ್ದು, ದೇವಸ್ಥಾನಕ್ಕೆ ಭಕ್ತರ ದರ್ಶನ ಸ್ಥಗಿತಗೊಳಿಸಲಾಗಿದೆ.
ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿ ಸಂಗಮಗೊಳ್ಳಲಿದ್ದು, ದೇವಸ್ಥಾನದ ಮೆಟ್ಟಿಲುಗಳು ನೀರಿನಲ್ಲಿ ಮುಳುಗಿವೆ. ದೇವಸ್ಥಾನದ ಒಳಗೂ ಸುಮಾರು ಎರಡು ಅಡಿಗೂ ಹೆಚ್ಚು ನೀರು ಬಂದಿದ್ದು, ಇಡೀ ದೇವಸ್ಥಾನದ ಸುತ್ತ ಅಪಾರ ನೀರು ಆವರಿಸಿಕೊಂಡಿದೆ.
ಕಳೆದ ಆಗಸ್ಟ ೬ರಂದು ಸಂಗಮನಾಥನ ದೇವಾಲಯದ ಸುತ್ತ ನೀರು ಆವರಿಸಿಕೊಂಡಿತ್ತು. ಆಗಲೂ ದೇವಸ್ಥಾನಕ್ಕೆ ಭಕ್ತರ ಭೇಟಿಯನ್ನು ಸುಮಾರು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಾಗಿತ್ತು.