ಜಾಲಹಳ್ಳಿ (ರಾಯಚೂರು): ಸಮಾನತೆಯ ಆಶಯವನ್ನು ಹೊಂದಿದ ನಮ್ಮ ದೇಶದ ಸಂವಿಧಾನವನ್ನೇ ಮನುವಾದಿಗಳು
ತಿರುಚಲು ಹೊರಟಿದ್ದಾರೆ. ಸಂವಿಧಾನವನ್ನು ವಿರೋಧಿಸುವ ಈ ಸಂತತಿಯೇ ದೇಶವನ್ನು ಆಳುತ್ತಿರುವುದು ದುರದುಷ್ಟಕರ
ಎಂದು ಸಿಪಿಎಂ ಮುಖಂಡ ನರಸಣ್ಣ ನಾಯಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ನಗರದ
ಸಿಪಿಎಂ ಕಚೇರಿಯಲ್ಲಿ ತಾಲೂಕು ಮಟ್ಟದ ಸಂವಿಧಾನ ಮತ್ತು ಕಾರ್ಯಕ್ರಮ ಎಂಬ ಹೆಸರಿನಲ್ಲಿ ಒಂದು ದಿನದ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸಂವಿಧಾನದ ಪಾಠವನ್ನು ಕರಿಯಪ್ಪ ಅಚೊಳ್ಳಿ ಅವರು ಮಾಡಿದರು.
ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವಿರೇಶ್, ತಾಲೂಕು ಕಾರ್ಯದರ್ಶಿ ಹೆಚ್.ಶಬ್ಬೀರ್, ಎಸ್.ಎಫ್.ಐ ಮುಖಂಡರಾದ ನಿಂಗಣ್ಣ ಮಕಾಶಿ, ಅಮರೇಶ್ ನಾಯಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.