ಜೈಲಲ್ಲಿ ಇದ್ಕೊಂಡೆ ಸ್ಕೇಚ್..!

ಜೈಲಲ್ಲಿ ಇದ್ಕೊಂಡೆ ಸ್ಕೇಚ್..!

ಬೆಂಗಳೂರು, ಅ. 8 : ಜೈಲಲ್ಲಿ ಇದ್ದುಕೊಂಡೆ ರೌಡಿ ನಾಗ ಪೊಲೀಸರಿಗೆ ಮಹೂರ್ತ ಇಡಲು ಮುಂದಾಗಿದ್ದ ಎಂಬ ಮಾಹಿತಿ ಎಸಿಪಿಯ ದೂರಿನ ಮೂಲಕ ತಿಳಿದು ಬಂದಿದೆ.
ಶ್ರೀರಾಂಪುರದ ಕ್ರೈಂ ಪಿಸಿಗಳಾದ ರವಿ ಶಿವಣ್ಣ, ಮೋಹನ್, ಮಲ್ಲಿಕಾರ್ಜುನ್, ನಟರಾಜ್ ಸೇರಿ ಒಂಬತ್ತು ಜನರನ್ನು ಮುಗಿಸಲು ರೌಡಿ ನಾಗ ಸಂಚು ರೂಪಿಸಿದ್ದ. ಇವರಲ್ಲಿ ಯಾರೊಬ್ಬರಿಗಾದರೂ ಹಲ್ಲೆ ಅಥವಾ ಪ್ರಾಣ ತೆಗೆಯಲು ಜೈಲಲ್ಲಿ ಇದ್ದುಕೊಂಡೆ ಮುಂದಾಗಿದ್ದ. ಈ ಪಿಸಿಗಳನ್ನು ಮುಗಿಸಲು ಬಡ್ಡಿಂಗ್ ರೌಡಿಗಳನ್ನು ಬಳಸಿ ಈ ಸಂಚು ರೂಪಿಸಿದ್ದ ಎಂಬುದನ್ನು ಸ್ವತಃ ಪಿಸಿಗಳು, ಎಸಿಪಿಗೆ ದೂರು ನೀಡಿದ್ದಾರೆ.
ಈ ಹಿಂದೆ ಮಲ್ಲೆಶ್ವರಂ ಸಬದ ಡಿವಿಷನ್ಗೆ ಎಸಿಪಿ ಧನಂಜಯ್ ಅವರಿಗೆ ಶ್ರೀರಾಂಪುರದ ನಟೋರಿಯಸ್ ರೌಡಿ ನಾಗ ಬಗ್ಗೆ ಪಿಸಿಗಳು ವಿಚಾರ ಮುಟ್ಟಿಸಿದ್ದರು. ಆಗ ಎಸಿಪಿ ಅವರು ಪಿಸಿಗಳ ಮೌಖಿಕ ದೂರನ್ನು ಅಲ್ಲಗೆಳೆದು ಬೈದು ಕಳಿಸಿದ್ದರು. ಸದ್ಯ ಹಾಲಿ ಎಸಿಪಿಗೆ ಲಿಖಿತ ದೂರು ಸಲ್ಲಿಸಿರುವ ಪಿಸಿಗಳು, ಈ ವಿಷಯವನ್ನು ಹೊರ ಬರದಂತೆ ಎಸಿಪಿ, ಪಿಸಿಗಳು ನಿಗೂಢತೆ ಕಾಪಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos