ಬೆಂಗಳೂರು, ಮಾ, 28, ನ್ಯೂಸ್ ಎಕ್ಸ್ ಪ್ರೆಸ್: ಇಂದು ರಾಜ್ಯದಲ್ಲಿ ಏಕಕಾಲಕ್ಕೆ 10 ಉದ್ಯಮಿಗಳೂ ಸೇರಿದಂತೆ 15ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಮಧ್ಯರಾತ್ರಿ ಐಟಿ ಶಾಕ್ ನೀಡಿದ್ದಾರೆ. ಕೇಂದ್ರದ ಬಿಜೆಪಿ ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವ ಐಟಿ ಮುಖ್ಯಸ್ಥ ಹಾಗೂ ಚುನಾವಣೆಯ ಸಮಯದಲ್ಲಿ ಏಕಪಕ್ಷೀಯವಾಗಿ ಕೆಲವೇ ಆಯ್ದ ವ್ಯಕ್ತಿಗಳ ಮೇಲೆ ನಡೆದಿರುವ ಐ.ಟಿ. ರೇಡ್ ವಿರುದ್ಧ ಪ್ರತಿಭಟನೆಯಲ್ಲಿ ಬೆಂಗಳೂರು ದಕ್ಷಿಣ ಕಾಂಗ್ರೆಸ್ ಸಮಿತಿಯ ಮುಖಂಡರುಗಳಾದ ಶ್ರೀ ರಾಜಣ್ಣ, ಹೆಚ್.ಟಿ.ಜಯಣ್ಣ ಅವರುಗಳಲ್ಲದೆ ಸ್ಥಳೀಯ ಜೆಡಿಎಸ್ ಮುಖಂಡರುಗಳೊಂದಿಗೆ ಆದಾಯ ತೆರಿಗೆ ಕಚೇರಿಯ ಮುಂದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು.