ಐಟಿ ದಾಳಿ: ಆಪ್ತರೊಂದಿಗೆ ಸಿಎಂ ರಹಸ್ಯ ಸಭೆ

ಐಟಿ ದಾಳಿ: ಆಪ್ತರೊಂದಿಗೆ ಸಿಎಂ ರಹಸ್ಯ ಸಭೆ

ಮೈಸೂರು, ಮಾ, 28, ನ್ಯೂಸ್ ಎಕ್ಸ್ ಪ್ರೆಸ್: ಇಂದುಬೆಳ್ಳಂಬೆಳಗ್ಗೆ ಐಟಿ ದಾಳಿ ಮೂಲಕ ಆಪ್ತರಿಗೆ ಬಿಸಿ ಮುಟ್ಟಿಸಿದ್ದಕ್ಕೆ ಇನ್ಫೋಸಿಸ್ ಅತಿಥಿಗೃಹದಲ್ಲಿ ಸಿಎಂ ಕುಮಾರಸ್ವಾಮಿ ತಮ್ಮ ಆಪ್ತರೊಂದಿಗೆ ಸಭೆ ನಡೆಸುತ್ತಿದ್ದಾರೆ. ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಮನೆ ಹಾಗೂ ಅವರ ಸಹೋದರರ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಬೆನ್ನಲ್ಲೇ ಇಂದು ಕೆ.ಆರ್. ಪೇಟೆಯಿಂದ ದಿಢೀರ್ ಬಂದು ಸಿಎಂ‌ ಸಭೆ ನಡೆಸುತ್ತಿದ್ದಾರೆ. ಸಚಿವರಾದ ಸಾ.ರಾ. ಮಹೇಶ್, ಸಂಸದ ಶಿವರಾಮೇಗೌಡ, ಮಂಡ್ಯ ಜಿಲ್ಲೆಯ ಶಾಸಕರು ಹಾಗೂ ಪಕ್ಷದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ‌.

ಫ್ರೆಶ್ ನ್ಯೂಸ್

Latest Posts

Featured Videos