ಹಲವು ರೋಗಗಳಿಗೆ ರಾಮಬಾಣ ಇದು

ಹಲವು ರೋಗಗಳಿಗೆ ರಾಮಬಾಣ ಇದು

ಬೆಂಗಳೂರು, ಜ. 30: ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಬದನೇಕಾಯಿ ಬಜ್ಜಿ, ಗೊಜ್ಜು, ಎಣ್ಣೆಗಾಯಿ ಮಾಡುತ್ತಾರೆ. ಕೆಲವರಿಗೆ ಇದು ಇಷ್ಟವಾಗುತ್ತದೆ. ಇನ್ನು ಕೆಲವರಿಗೆ ಇದು ಇಷ್ಟವಾಗೋದಿಲ್ಲ. ಆದರೆ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾನೇ ಲಾಭ ಇದೆ.

ಬದನೆಯಲ್ಲಿ ಹೆಚ್ಚಿನ ನಾರಿನಂಶವಿದೆ. ಇದು ದೇಹದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡಿ ಮಧುಮೇಹ ನಿಯಂತ್ರಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಹೃದಯಕ್ಕೆ ಉತ್ತಮ ಕೊಲೆಸ್ಟ್ರಾಲ್ ನೀಡಿ. ಹಾರ್ಟ್ ಅಟ್ಯಾಕ್ ಮೊದಲಾದ ಹೃದಯ ಸಮಸ್ಯೆ ಉಂಟಾಗುತ್ತದೆ. ಕ್ಯಾನ್ಸರ್ ವಿರುದ್ಧ ಹೊರಡುವ ಶಕ್ತಿ ಕೂಡ ಬದನೆಯಲ್ಲಿರುವ ಪೆನೋಲಿಕ್ ಅಂಶಗಳಿಗೆ ಇವೆ.

ಬಿಪಿ ಸಮಸ್ಯೆ ಇದ್ದರೆ ಬದನೇಕಾಯಿ ತೆಗೆದುಕೊಂಡು ಅದನ್ನು ಚೆನ್ನಾಗಿ ರುಬ್ಬಿ ನಂತರ ಸೋಸಿ ನೀರು ಮಾತ್ರ ಸೇವಿಸಿ. ಇದು ಉತ್ತಮ ಪರಿಹಾರ ನೀಡುತ್ತದೆ. ಇದರಲ್ಲಿರುವ ನಿಕೋಟಿನ್ ಅಂಶ ಧೂಮಪಾನ ಚಟವನ್ನು ನಿಯಂತ್ರಿಸುತ್ತದೆ.

ಬದನೆ ಸೇವನೆ ಮಾಡಿದರೆ ಹೃದಯ, ರಕ್ತನಾಳದ ಸಮಸ್ಯೆ ನಿವಾರಣೆ ಮಾಡುತ್ತದೆ. ಆರೋಗ್ಯದಿಂದಿರಲು ಸಹಾಯವಾಗುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos