ಪದಾಧಿಕಾಗಳ ಆದೇಶ ಪತ್ರ ವಿತರಣೆ

ಪದಾಧಿಕಾಗಳ ಆದೇಶ ಪತ್ರ ವಿತರಣೆ

ಮಹದೇವಪುರ:ಅಜಾತ ಶತೃ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ ಮೀಸಲಾತಿ ಮುಂದುವರೆಸುವ ಸಂವಿದಾನ ತಿದ್ದುಪಡಿಯನ್ನು ಮಾಡಿದರು ಎಂದು ಕ್ಷೇತ್ರದ ಎಸ್.ಸಿ ಮೋರ್ಚಾ ಉಪಾದ್ಯಾಕ್ಷ ಕೆ.ಮಾರುತಿ ತಿಳಿಸಿದರು.
ಕ್ಷೇತ್ರದ ಕಾಟಂನಲ್ಲೂರು ಬಳಿಯಿರುವ ಖಾಸಗಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್.ಸಿ.ಮೋರ್ಚಾ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಆದೇಶ ಪತ್ರ ವಿತರಿಸಿ ಮಾತನಾಡಿದರು.
ಸಮಾಜದ ಎಲ್ಲಾ ಕುಟುಂಬಗಳು ಸರಿಸಮನಾಗಿ ಬದುಕುವ ಉದ್ದೇಶದಿಂದ ತೀರ್ಮಾನವನ್ನು ಅಂದಿನ ಪ್ರದಾನಿ ವಾಜ್ ಪೇಯಿ ಅವರ ಸರ್ಕಾರ ತೆಗೆದುಕೊಂಡಿತು ಎಂದು ತಿಳಿಸಿದರು.
ನಿಗಮ ಮಂಡಲಿಗಳಲ್ಲಿ ಮೀಸಲಿಟ್ಟಿರುವ ಅನುದಾನ ನಿಜವಾದ ಫಲಾನುಬವಿಗಳಿಗೆ ತಲುಪುತ್ತಿಲ್ಲ ಅದನ್ನು ತಲುಪಿಸುವ ಹಾಗೆ ನಾವು ನೀವೆಲ್ಲಾ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಶಾಸಕ ಅರವಿಂದ ಲಿಂಬಾವಳಿ ಅವರು ನನಗೆ ನೀಡಿರುವ ಎಸ್.ಸಿ ಮೋರ್ಚಾ ಉಪಾದ್ಯಾಕ್ಷ ಸ್ಥಾನವನ್ನು ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿ ಜನಾಂಗದ ಹಾಗೂ ಪಕ್ಷದ ಅಭಿವೃದ್ಧಿಗೆ ಶ್ರಮಿಸುತ್ತೆನೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಎಸ್.ಸಿ ಮೊರ್ಚಾ ಪಧಾದಿಕಾರಿಗಳು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos