ಒಳ ಮೀಸಲಾತಿ ಕರಪತ್ರ ಬಿಡುಗಡೆ..!

ಒಳ ಮೀಸಲಾತಿ ಕರಪತ್ರ ಬಿಡುಗಡೆ..!

ವಿಜಯನಗರ: ನಗರದ ಡಾ.ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಈ ತಿಂಗಳ ಕೊನೆಯ 31ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ನಡೆಯಲಿರುವ ಒಳ ಮೀಸಲಾತಿ ಸಾಂಕೇತಿಕ ಹೋರಾಟದ ಕರಪತ್ರಗಳನ್ನು ವಿಜಯನಗರ ಜಿಲ್ಲೆಯ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘದ ಮಾಜಿ ಅಧ್ಯಕ್ಷರಾದ ಎನ್ ವೀರಸ್ವಾಮಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ ಸುಮಾರು 30 ದಶಕಗಳ ಕಾಲ ಒಳ ಮೀಸಲಾತಿಗಾಗಿ ಹೋರಾಟವನ್ನು ನಮ್ಮ ಸಮಾಜ ನಿರಂತರವಾಗಿ ಮಾಡುತ್ತಾ ಬಂದಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆಯಾ ಸಂದರ್ಭಕ್ಕೆ ತಕ್ಕಂತೆ ಸರ್ಕಾರಗಳು ಸುಳ್ಳು ಭರವಸೆಗಳನ್ನು ನೀಡುತ್ತಾ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿವೆ. ಈ ನಿಟ್ಟಿನಲ್ಲಿ ಇದೇ ತಿಂಗಳ 31 ಮಂಗಳವಾರ ಸ್ವತಂತ್ರ ಉದ್ಯಾನವನದಲ್ಲಿ ಸಾಂಕೇತಿಕ ಹೋರಾಟವನ್ನು ನಡೆಸುವುದಾಗಿ ಹೇಳಿದರು.

ಮತ್ತೊಬ್ಬ ದಲಿತ ನಾಯಕರಾದ ಕರಿಯಪ್ಪ ಗುಡಿಮನಿ ಮಾತಾನಾಡಿ ಈ ಹಿಂದೆ ಹರಿಹರ ದಿಂದ ಬೆಂಗಳೂರಿಗೆ 14 ದಿನ 410 ಕಿಲೋಮೀಟರ್ ನಡೆದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಿದ್ದೆವು ಆದರೆ ಸಿಕ್ಕ ಫಲ ಹತ್ತು ಮಂದಿ ನಾಯಕರ ಮೇಲೆ ಕೇಸ್ ನಂತರ ಎದೆಗುಂದದೆ ಸಮಾಜ ನಿರಂತರವಾಗಿ 112 ದಿವಸ ಪ್ರತಿಭಟನೆ ನಡೆಸಿದ್ದರ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಸುಳ್ಳು ಆಶ್ವಾಸನೆ ನೀಡಿ ಅದಕ್ಕೊಂದು ಉಪಸಮಿತಿ ರಚಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದಾರೆ. ಆದರೆ ಕಾನೂನು ಬದ್ಧವಾಗಿ ಮಾಡಬೇಕಾದರೆ ಸದನದಲ್ಲಿ 224 ವಿಧಾನಸಭಾ ಸದಸ್ಯರ ಅನುಮೋದನೆ ತೆಗೆದುಕೊಂಡು ರಾಜ್ಯಪಾಲರ ಅಂಕಿತದೊಂದಿಗೆ ಕೇಂದ್ರಕ್ಕೆ ಶಿಫಾರಸು ಮಾಡಬಹುದಿತ್ತು ಅದನ್ನು ಮಾಡದೆ ತರತುರಿಯಲ್ಲಿ ಮಾದಿಗ ಜನಾಂಗದ ಮತಸೆಳೆಯಲು ಅವೈಜ್ಞಾನಿಕವಾಗಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು.

ಈ ಸಂಬಂಧ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುನಬೇಕಾಯಿತು ಎಂದು ಹೇಳಿದರು. ಇನ್ನು ದಲಿತ ಸಂಘರ್ಷ ಸಮಿತಿಯ ವಿಜಯನಗರ ಜಿಲ್ಲೆಯ ಸಂಚಾಲಕರಾದ ಕೊಟಿಗಿನಾಳ್ ಮಲ್ಲಿಕಾರ್ಜುನ ಮಾತನಾಡಿ. ಈ ಹಿಂದೆ ಬಿಜೆಪಿ 2019 ರಲ್ಲಿ ಸರ್ಕಾರ ಸಂಸದರಿಗೆ ಈ ಮಸೂದೆಯ ಪ್ರತಿಗಳನ್ನು ನೀಡದೆ ಮತ್ತು ಚರ್ಚೆಯಲ್ಲಿ ನಡೆದ ತಕರಾರುಗಳನ್ನು ದಾಖಲಿಸದೆ ಸಂವಿಧಾನದ 103ನೇ ತಿದ್ದುಪಡಿ ಮಾಡಿ ರಾತ್ರಿ 10 ಗಂಟೆಗೆ  ಇವಿಎಸ್ 10% (ಎಕನಾಮಿಕಲಿ ವೀಕರ್ ಸೆಕ್ಷನ್)8 ಜನವರಿ 2019 ರಂದು (323 ಪರ 3 ವಿರೋಧ) ದಿಂದ ಅಂಗೀಕರಿಸಲಾಯಿತು.

ಆದರೆ ಬಹುಜನರಾದ ನಾವು 2005 ರಿಂದ ಇಲ್ಲಿಯವರೆಗೆ ಸದಾಶಿವ ಆಯೋಗ ಜಾರಿ ಮಾಡಲು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ ಇದರಲ್ಲಿ ಅದೆಷ್ಟೋ ಹೋರಾಟ ಮಾಡಿದ ನಮ್ಮ ಹಿರಿಯರು ಈಗ ಜೀವಂತದಲಿಲ್ಲ ಆದಕಾರಣ ಮುಂದಿನ ದಿನಗಳಲ್ಲಿ ರಾಜ್ಯ ನಾಯಕರ ಜೊತೆ ಚರ್ಚೆ ಮಾಡಿ ಒಳ ಮೀಸಲಾತಿ ನೀಡುವವರಿಗೆ ತೀವ್ರ ತರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಆಕ್ರೋಶಭರಿತವಾಗಿ ಹೇಳಿದರು.

ಗೋವಿಂದರಾಜು, ರಾಮಚಂದ್ರ, ಬಿಎಡ್ ಹನುಮಂತಪ್ಪ, ಸ್ವರೂಪರಾಣಿ, ಸ್ಲಂಶೇಷು, ವಾಸು ನಾಥ, ಶೇಖರ್, ಮಹದೇವ, ಮರಿದಾಸ, ಜಯರಾಮ, ಸೇಲ್ವಂ ಇತರರು ಇದ್ದರು.

ವರದಿಗಾರ ಎ ಚಿದಾನಂದ, ವಿಜಯನಗರ.

ಫ್ರೆಶ್ ನ್ಯೂಸ್

Latest Posts

Featured Videos