ಬೆಂಗಳೂರು, ಡಿ. 21: ಬೆಂಗಳೂರು ದಕ್ಷಿಣಾ ವಿಧಾನಸಭಾ ಕ್ಷೇತ್ರದ ಯಾರಂಡಹಳ್ಳಿ ಗ್ರಾಮದ ಸಮೀಪದಲ್ಲಿ ಮಾತೃಧಾಮ ಸಂಸ್ಥೆ ವತಿಯಿಂದ ಅಂತರ್ ಶಾಲಾ ಮಟ್ಟದ ಕ್ರೀಡಾ ಕೂಟವನ್ನು ಆಯೋಜಿಸಲಾಗಿತ್ತು. ಅಂತರಾಷ್ಠೀಯ ಕ್ರೀಡಾಪಟು ಕೃಪಾ, ವೀಲ್ ಚೇರ್ ಟೆನ್ನಿಸ್ ಆಟಗಾರ ಅನಿಲ್ ರವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತೃಧಾಮ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಗಾಯಿತ್ರಿ ಗೋಪಿನಾಥ್ ರೆಡ್ಡಿ ಮತ್ತು ನಯಾ ಸಂಸ್ಥಾಪಕ ಭರತ್ ಭೂಷಣ್ ಭಾಗವಹಿಸಿದ್ದರು.