ದೇವರೇ.. ಇಂತಹ ಪರಿಸ್ಥಿತಿ ಬಾರದು

ದೇವರೇ.. ಇಂತಹ ಪರಿಸ್ಥಿತಿ  ಬಾರದು

ಚಿಕ್ಕಮಗಳೂರು, ಆ.11 : ಪ್ರಕೃತಿಯ ಮುನಿಸಿಗೆ ನರ ಮನುಷ್ಯನ ಜನಜೀವನ ಪಾತಾಳ ತಲುಪಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿಯಲ್ಲಿ ಮೃತದೇಹಗಳನ್ನು ಕೊಂಡೊಯ್ಯಲೂ ದಾರಿಯಿಲ್ಲ. ತಾಯಿ, ಮಗನ ಮೃತದೇಹಗಳನ್ನು ಅಂಬುಲೆನ್ಸ್ ನಲ್ಲಿರಿಸಿ ಕುಟುಂಬ ದಾರಿ ಕಾಣದೆ ಕಂಗಾಲಾಗಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ವರುಣ, ಅಲ್ಲಲ್ಲಿ ಕುಸಿದು ಬೀಳುತ್ತಿರುವ ಗುಡ್ಡಗಳು, ಆಶ್ಲೇಷದ ಈ ಅತಿವೃಷ್ಠಿಗೆ ಅಪಾರ ಹಾನಿಯಾಗಿದ್ದರೂ, ಇಲ್ಲೊಂದು ಕುಟುಂಬದ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಜನ ಕಣ್ಣೀರಿಡುತ್ತಿದ್ದಾರೆ.
ಶನಿವಾರ ಹೊರಟ್ಟಿಯಲ್ಲಿ ಗುಡ್ಡ ಕುಸಿದು ತಾಯಿ ಶೇಷಮ್ಮ ಮತತು ಮಗ ಸತೀಶ್ ಸಾಮನ್ನಪ್ಪಿದರು. ಆದರೆ ಮೂಡಿಗೆರೆಯ ಬಾಳೂರು ಹೊರಟ್ಟಿ ರಸ್ತೆ ಸಂಪರ್ಕ ಬಂದ್ ಆಗಿರುವ ಕಾರಣ ನಿನ್ನೆ ರಾತ್ರಿಯಿಂದಲೂ ಮೃತದೇಹಗಳು ಆಂಬುಲೆನ್ಸ್ ನಲ್ಲಿಯೇ ಇವೆ.ಮೃತದೇಹಗಳನ್ನು ಕೊಂಡೊಯ್ಯಲಾಗದೇ ಸಂಬಂಧಿಕರು ಗೋಳಾಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos