ಮಂಡ್ಯ,ಡಿ. 3 : 5ರಂದು ಕೆ.ಆರ್.ಪೇಟೆ ಉಪಚುನಾವಣೆ ನಡೆಯಲಿದ್ದು, ಈ ಬಗ್ಗೆ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಬಿಜೆಪಿಯ ಹೊರಗಿನವರ ಆಟದಿಂದ ನಾರಾಯಣಗೌಡರ ಆಟ ಇಲ್ಲಿವರೆಗೆ ನಡೆಯಿತು. ನಿಜವಾದ ಕ್ಲೈಮ್ಯಾಕ್ಸ್ ಹೇಗಿರುತ್ತೆ ಅಂತ ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ತೋರಿಸಿಕೊಡ್ತಾರೆ ಎಂದು ಕಿಡಿಕಾರಿದ್ದಾರೆ.
ಅಲ್ಲದೇ, ನಮ್ಮ ಅಭ್ಯರ್ಥಿ ಬಿ.ಎಲ್.ದೇವರಾಜು ಬಹುಮತದಿಂದ ಗೆಲ್ತಾರೆ. ಕಾಂಗ್ರೆಸ್ ಬಗ್ಗೆ ನಾನು ಮಾತನಾಡಲ್ಲ. ಅವ್ರು ನಮ್ಮ ಹಳೆಯ ಸ್ನೇಹಿತರು. ನೂರಕ್ಕೆ ನೂರು ರಾಜ್ಯದಲ್ಲಿ ರಾಜಕೀಯ ದೃಢೀಕರಣ ಆಗುತ್ತೆ ಎಂದಿದ್ದಾರೆ.