ಬೆಂಗಳೂರು, ಮಾ.18, ನ್ಯೂಸ್ ಎಕ್ಸ್ ಪ್ರೆಸ್ : ಇಂದಿರಾ ಕ್ಯಾಂಟೀನ್ನಲ್ಲಿ ತಯಾರಾಗುವ ಆಹಾರವನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಭಯಾನಕ ಅಂಶ ಬೆಳಕಿಗೆ ಬಂದಿದೆ. ಜಯನಗರ, ಜೆಪಿ ನಗರ ಹಾಗೂ ನಾಗಾಪುರ ವಾರ್ಡ್ಗಳಲ್ಲಿ ಊಟದ ಸ್ಯಾಂಪಲ್ಅನ್ನು ಪರೀಕ್ಷಿಸಲಾಗಿದೆ. ರಾಜ್ಯ ಸರ್ಕಾರದ ಮಹತ್ವಾಂಕ್ಷೆಯ ಇಂದಿರಾ ಕ್ಯಾಂಟೀನ್ ಉತ್ತಮ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ, ಈಗ ಆ ಕ್ಯಾಂಟೀನ್ ಊಟ ಸೇವಿಸಿದರೆ ಪ್ರಾಣಕ್ಕೆ ಸಂಚಕಾರ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಇಂದಿರಾ ಕ್ಯಾಂಟೀನ್ನಲ್ಲಿ ತಯಾರಾಗುವ ಆಹಾರವನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಭಯಾನಕ ಅಂಶ ಬೆಳಕಿಗೆ ಬಂದಿದೆ. ಜಯನಗರ, ಜೆಪಿ ನಗರ ಹಾಗೂ ನಾಗಾಪುರ ವಾರ್ಡ್ಗಳಲ್ಲಿ ಊಟದ ಸ್ಯಾಂಪಲ್ಅನ್ನು ಪರೀಕ್ಷಿಸಲಾಗಿದೆ. ಅದರಂತೆ ಸ್ಯಾಂಪಲ್ಅನ್ನು ಪರೀಕ್ಷಿಸಿ ರಾಮಯ್ಯ ಆಸ್ಪತ್ರೆಯ ವೈದ್ಯರು, ಈ ಊಟದಲ್ಲಿ ಅತಿಯಾದ ಪ್ರಮಾಣದಲ್ಲಿ ಕ್ರಿಮಿ-ಕೀಟಗಳು ಇರುವುದಾಗಿ ವರದಿ ನೀಡಿದ್ದಾರೆ. ಮಹಾನಗರ ವ್ಯಾಪ್ತಿಯಲ್ಲಿ ಸುಮಾರು 16 ಸಾವಿರ ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ನಿಂದ ಊಟ ಕೊಡಲಾಗುತ್ತಿದೆ. ರಾತ್ರಿ ಉಳಿದ ಊಟವನ್ನು ಬೆಳಗ್ಗೆ ಪೌರ ಕಾರ್ಮಿಕರಿಗೆ ನೀಡಲಾಗುತ್ತಿದೆ. ಸ್ವಚ್ಚತೆ ಇಲ್ಲದೆ ಆಹಾರವನ್ನು ಗುತ್ತಿಗೆದಾರರು ಪೂರೈಕೆ ಮಾಡುತ್ತಿದ್ದಾರೆ.
ವೈದ್ಯ ಡಾ.ಶಿವಪ್ರಕಾಶ್ ಎಂಬುವವರು ಟೆಸ್ಟ್ ರಿಪೋರ್ಟ್ ನೀಡಿದ್ದು. ಈ ಊಟ ಸೇವಿಸಲು ಯೋಗ್ಯವಲ್ಲ. ಅತಿ ಹೆಚ್ಚು ಕ್ರಿಮಿ ಕೀಟಗಳು ಇದರಲ್ಲಿದೆ. ಮುಂಜಾಗ್ರತಾ ಕ್ರಮ ವಹಿಸದಿದ್ರೆ ಪ್ರಾಣಕ್ಕೆ ಸಂಚಕಾರ ಬರಲಿದೆಯಂತೆ!