ಅನಾನುಭವಿಗಳೇ ಹೆಚ್ಚಿರುವ ಸಂಪುಟ

ಅನಾನುಭವಿಗಳೇ ಹೆಚ್ಚಿರುವ ಸಂಪುಟ

ಬೆಳಗಾವಿ : ರಾಜ್ಯಕ್ಕೆ ನಾಲ್ಕು ಸಚಿವ ಸ್ಥಾನ ಸಿಕ್ಕಿರುವುದು ನಿಷ್ಪ್ರಯೋಜಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಸಂಪುಟದಲ್ಲಿ ರಾಜ್ಯದ ನಾಲ್ವರಿಗೆ ಸಚಿವ ಸ್ಥಾನ ಸಿಕ್ಕರೂ ರಾಜ್ಯಕ್ಕೇನೂ ಲಾಭವಿಲ್ಲ. ಪ್ರಧಾನಿ ಮೋದಿ ಅವರೇ ಫೇಲ್ಯೂರ್ ಆಗಿದ್ದಾಗ ಇನ್ನೂ ಸಚಿವರಿಂದ ನಿರೀಕ್ಷೆ ಅಸಾಧ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

ಅನಾನುಭವಿಗಳೇ ಹೆಚ್ಚಿರುವ ಸಂಪುಟದಲ್ಲಿ ಅಭಿವೃದ್ಧಿ ವೇಗ ಮತ್ತಷ್ಟು ಕುಂಠಿತಗೊಳ್ಳಲಿದೆ. ಈ ಮೊದಲು ಕೇಂದ್ರದ ಅಭಿವೃದ್ಧಿ ವೇಗ ಶೇ. 50 ರಷ್ಟು ಮಾತ್ರ ಇತ್ತು. ಇನ್ಮುಂದೆ ಇದರ ವೇಗ ಶೇ. 30 ಕ್ಕೆ ಕುಸಿಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos