ರಾಯಚೂರು, ಡಿ. 12 : ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವ ಹಿನ್ನೆಲೆ ಎಚ್ಚೆತ್ತ ಗ್ರಾಮ ಪಂಚಾಯಿತಿ ಆಡಳಿತವು ಸೂಚನೆ ಫಲಕ ಹಾಕಿದೆ.
ಸಮೀಪದ ಮನ್ಸಲಾಪುರ ಕೆರೆಯಲ್ಲಿ ಗುರುವಾರ ಬೆಳಗ್ಗೆ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇಂದು ಗ್ರಾಮದ ಆರಾಧ್ಯದೈವ ಶ್ರೀ ಸಿದ್ಧಲಿಂಗೇಶ್ವರ ಸ್ಚಾಮಿ ಜಾತ್ರಾ ಮಹೋತ್ಸವವಿದ್ದು, ಗ್ರಾಮಕ್ಕೆ ದೂರದೂರುಗಳಿಂದ ಭಕ್ತರು ಪುಂಖಾನುಪುಂಖವಾಗಿ ಬರುತ್ತಿದ್ದು, ಎಚ್ಚೆತ್ತ ಗ್ರಾಮ ಪಂಚಾಯಿತಿ ಆಡಳಿತವು ಮೊಸಳೆ ಇದೆ ಎಂದು ಸೂಚನೆ ಫಲಕ ಅಳವಡಿಸಿ ಕೆರೆ ಹತ್ತಿರ ಸುಳಿಯದಂತೆ ಜನರಿಗೆ ಸೂಚಿಸಲಾಗಿದೆ. ಜಾನುವಾರುಗಳನ್ನು ಕೆರೆ ಹತ್ತಿರ ಕರೆದೊಯ್ಯದಂತೆ ಎಚ್ಚರಿಕೆ ನೀಡಲಾಗಿದೆ.