ಇಮ್ಮಡಿ ಮಹಾದೇವ ಸ್ವಾಮಿಗೆ ಜೀವ ಬೆದರಿಕೆ

ಇಮ್ಮಡಿ ಮಹಾದೇವ ಸ್ವಾಮಿಗೆ ಜೀವ ಬೆದರಿಕೆ

ಚಾಮರಾಜನಗರ, ಅ.21 : ಸುಳ್ವಾಡಿ ವಿಷ ಪ್ರಸಾದ ದುರಂತದ ಆರೋಪಿ ಇಮ್ಮಡಿ ಮಹಾದೇವ ಸ್ವಾಮಿ ಬೆಂಬಲಿಗರು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಪಟ್ಟದ ಗುರುಸ್ವಾಮೀಜಿಗೆ ಜೀವ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿಬಂದಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಹಿರಿಯ ಶ್ರೀಗಳು, ಇಮ್ಮಡಿ ಮಹಾದೇವಸ್ವಾಮಿ ಬೆಂಬಲಿಗರು ನಿತ್ಯ ಮಠಕ್ಕೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದಾರೆ. ಅಲ್ಲದೇ ಪ್ರಾಣ ಬೆದರಿಕೆ ಹಾಕುತ್ತಿದ್ದು, ಈ ಕುರಿತು ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos