ಬೆಂಗಳೂರು, ಜು.10: ಬೆಂಗಳೂರು ನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಹೌದು. ಉಗ್ರಗಾಮಿಗಳ ಟಾರ್ಗೆಟ್ ಆಗಿದೆಯಾ ಬೆಂಗಳೂರು.? ಇಂದು ಎನ್ಐಎ ತಂಡದಿಂದ ಹೊರಬಿದ್ದಿದೆ ದೇಶವೆ ಬೆಚ್ಚಿ ಬೀಳಿಸುವ ಸ್ಪೋಟಕ ಮಾಹಿತಿ ಒಂದು.
ತಮಿಳುನಾಡಿನ ಕೃಷ್ಣಗಿರಿಯ ಬೆಟ್ಟದ ಮೇಲೆ ಮೂರು ಪ್ರಾಯೋಗಿಕ ರಾಕೆಟ್ ಬಾಂಬ್ ಉಡಾವಣೆ ಮಾಡಿದ್ದ ಕುರಿತ ಖಚಿತ ಮಾಹಿತಿ ಒಂದು ಹೊರ ಬಿದ್ದಿದೆ. ಬೆಂಗಳೂರಿನ ದೇವನಹಳ್ಳಿಯ ಮಸೀದಿಯೊಂದರಲ್ಲಿ ಸಿಕ್ಕಿ ಬಿದ್ದ ಮತ್ತೊಬ್ಬ ಶಂಕಿತ ಉಗ್ರ ಹಬೀಬುರ್ ರೆಹಮಾನ್.
ಕಳೆದ ವರ್ಷ ಇವರೆಲ್ಲ ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ವಾಸ್ತವ್ಯ ಮಾಡಿದ್ದರು.
ಈಗ ಇವರುಗಳು ಎಲೆಕ್ಟ್ರಾನಿಕ್ ಶಿಕಾರಿ ಪಾಳ್ಯ ಹಾಗು ಬೇಗೂರಿ ಮನೆಯಲ್ಲಿಯೇ ಬಾಂಬ್, ರಾಕೆಟ್ ತಯಾರಿಕೆ ನೆಡೆಸಿದ್ದಾರೆ ಎಂಬುವುದು ಕಚಿತವಾಗಿದೆ.
ಹೀಗೆ ತಯಾರಿಸಿದ ರಾಕೆಟ್ ಅನ್ನು ತಮಿಳುನಾಡಿನ ಕೃಷ್ಣಗಿರಿ ಬೆಟ್ಟಕ್ಕೆ ಒಯ್ದು, ಪ್ರಾಯೋಗಿಕವಾಗಿ ಉಡಾಯಿಸಿದ ಶಂಕಿತ ಉಗ್ರರು.
ಇವರಿಂದ ಇಗಾಗಲೇ 3 ರಾಕೆಟ್ ಉಡಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಈ ಪೈಕಿ 2 ರಾಕೆಟ್ ಉಡಾವಣೆ ಯಶಸ್ವಿಯಾಗಿದೆ ಎಂದು ಉಗ್ರರು ಬಾಯಿ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿರು ಬೌದ್ಧರನ್ನೇ ಇವರು ಗುರಿಯಾಗಿಸಿ ಈ ರಾಕೆಟ್ ಪ್ರಯೋಗಿಸಲು ಸಂಚುಮಾಡಿದ್ದಾರೆ.
ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಿಚಾರಣೆ ವೇಳೆ ಆಘಾತಕಾರಿ ಮಾಹಿತಿ ಹೊರಗೆಡವಿದ ಶಂಕಿತ ಉಗ್ರ ಹಬೀಬುರ್ ರೆಹಮಾನ್.