ಆದರ್ಶ ದಂಪತಿ ಪ್ರಶಸ್ತಿ ಪ್ರದಾನ ಸಮಾರಂಭ

  • In State
  • December 20, 2020
  • 197 Views
ಆದರ್ಶ ದಂಪತಿ ಪ್ರಶಸ್ತಿ ಪ್ರದಾನ ಸಮಾರಂಭ

ಟಿ.ದಾಸರಹಳ್ಳಿ: ಕನ್ನಡ ಸಿರಿ ಎಂಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ ಹೇಳಿದರು.
ಬಾಗಲಗುಂಟೆಯ ಶ್ರೀ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾದ ಕನ್ನಡಸಿರಿ ಕಾರ್ಯಕ್ರಮದಲ್ಲಿ ಕನ್ನಡ ಸೇವಾ ರತ್ನ ಹಾಗೂ ಆದರ್ಶ ದಂಪತಿ ಪ್ರಶಸ್ತಿ ನೀಡಿ ಮಾತನಾಡಿದರು.
ಕನ್ನಡ ಕಟ್ಟುವಲ್ಲಿ ಅನೇಕ ಸಾಧಕರಿದ್ದಾರೆ, ಹಾಗೆಯೇ ಕನ್ನಡಕ್ಕಾಗಿ ಪತಿ ಅಥವಾ ಪತ್ನಿ ಯಾರೊಬ್ಬರ ಸೇವೆ ಕನ್ನಡಕ್ಕೆ ಇದ್ದರೆ ಅವರಿಗೂ ಆದರ್ಶ ದಂಪತಿ ನೀಡಲಾಗುತ್ತಿದೆ. ಇಂದು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸಾಧಕರನ್ನು ಅಭಿನಂದಿಸುತ್ತಿದ್ದೇವೆ ಎಂದರು.
ಬಿಜೆಪಿ ದಾಸರಹಳ್ಳಿ ಮಂಡಲ ಅಧ್ಯಕ್ಷ ಎನ್. ಲೋಕೇಶ್ ಅನ್ಯಭಾಷೆಯ ಧಾರಾವಾಹಿ ಹಾಗೂ ಚಲನಚಿತ್ರಗಳು ಡಬ್ ಆಗುವುದರಿಂದ ನೈಜವಾದ ಕನ್ನಡದ ಕಲಾವಿದರಿಗೆ ಕೆಲಸವಿಲ್ಲದಾಗಿದೆ. ಕಲಾವಿದರಾದ ಕನ್ನಡಿಗರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕನ್ನಡಪರ ಚಿಂತಕ ಬಿ.ಟಿ. ಶ್ರೀನಿವಾಸ್ ಎಸ್ ಮುನಿರಾಜು ಮಾರ್ಗದರ್ಶನದಲ್ಲಿ ನಾಡು-ನುಡಿಗಾಗಿ ಅನೇಕ ಸಾಧಕರು ಕೆಲಸ ಮಾಡುತ್ತಿದ್ದಾರೆ ಅಂಥವರನ್ನು ಗುರುತಿಸಿ ಅಭಿನಂದಿಸುತ್ತಿದ್ದೇವೆ ಎಂದರು.
ದಾಸರಹಳ್ಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ ಬಿ ಎಚ್ ಜಯದೇವ್ ಪ್ರಶಸ್ತಿ ಪಡೆದ ಸಾಧಕರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಯನ್ನು ನಾಡಿಗಾಗಿ ಮಾಡಬೇಕು ಎಂದರು,
ಸಮಾರಂಭದಲ್ಲಿ ಅನೇಕ ಕಲಾವಿದರು ಹಾಗೂ ಸಮಾಜಸೇವೆ ಮಾಡಿದವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು
ದಾಸರಹಳ್ಳಿ ಮಂಡಲ ಬಿಜೆಪಿ ಮಹಿಳಾ ಅಧ್ಯಕ್ಷೆ ಉಮಾದೇವಿ ನಾಗರಾಜು, ಟಿ.ಶಿವಕುಮಾರ್, ಪಿ ಎಚ್ ರಾಜು, ಕೃಷ್ಣಮೂರ್ತಿ, ಚಂದ್ರಶೇಖರ್ ಗೌರಿ ಶ್ರೀ, ಸಪ್ತಗಿರಿ ಆನಂದ್,ನವೀನ್ ರಾವ್ ಹಾಗೂ ಕಲಾವಿದರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos