ಕ್ರೈಸ್ಟ್ಚರ್ಚ್ ದಾಳಿಗೆ ಖಂಡನೆ: ಐಸಿಸಿ ಸಂತಾಪ

ಕ್ರೈಸ್ಟ್ಚರ್ಚ್ ದಾಳಿಗೆ ಖಂಡನೆ: ಐಸಿಸಿ ಸಂತಾಪ

ಕ್ರೈಸ್ಟ್​ಚರ್ಚ್ (ನ್ಯೂಜಿಲ್ಯಾಂಡ್​)​, ಮಾ.14, ನ್ಯೂಸ್ ಎಕ್ಸ್ ಪ್ರೆಸ್: ಅಲ್​ ನೂರ್​ ಮಸೀದಿಯಲ್ಲಿ ಪಾತಕಿಗಳು ನಡೆಸಿದ ಗುಂಡಿನ ದಾಳಿಗೆ ಬಲಿಯಾದವರಿಗೆ ಐಸಿಸಿ ಸಂತಾಪ ಸೂಚಿಸಿದೆ.

ಈ ಬಗ್ಗೆ ಮಾತನಾಡಿರುವ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರಿಚರ್ಡ್ಸನ್ ಕ್ರೈಸ್ಟ್​ ಚರ್ಚ್​ನ​ ಮಸೀದಿಯಲ್ಲಿ ನಡೆದ ಗುಂಡಿನ ದಾಳಿಗೆ ಬಲಿಯಾದವರಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ನಾಳಿನ ಪಂದ್ಯ ರದ್ದು ಮಾಡಿರುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಕಳೆದ ಫೆಬ್ರವರಿಯಿಂದ ನ್ಯೂಜಿಲ್ಯಾಂಡ್​ ಪ್ರವಾಸ ಕೈಗೊಂಡಿದ್ದ ಬಾಂಗ್ಲಾ ಕ್ರಿಕೆಟ್​ ತಂಡ ನಾಳೆಯಿಂದ ನ್ಯೂಜಿಲ್ಯಾಂಡ್​ ವಿರುದ್ಧ ಮೂರನೆ ಟೆಸ್ಟ್​ ಪಂದ್ಯ ಆಡಬೇಕಿತ್ತು. ಆದ್ರೆ ಇಂದು ನಡೆದ ಗುಂಡಿನ ದಾಳಿಯಿಂದ ಟೆಸ್ಟ್​​ ಪಂದ್ಯವನ್ನ ರದ್ದುಗೊಳಿಸಲಾಗಿದ್ದು, ಬಾಂಗ್ಲಾ ತಂಡ ತವರಿಗೆ ವಾಪಾಸ್​ ಆಗುವ ಸಾಧ್ಯತೆ ಇದೆ.

ಸದ್ಯ ಎಲ್ಲ ಕ್ರಿಕೆಟ್​ ಆಟಗಾರರನ್ನ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದ್ದು, ನಾವು ಕ್ರಿಕೆಟ್​​ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಬಾಂಗ್ಲಾ ಕ್ರಿಕೆಟ್​ ಬೋರ್ಡ್​ ಟ್ವೀಟ್​​ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos