ಹೊಸಕೋಟೆ, ಸೆ. 27: ನನ್ನ ನಂಬಿದ ಜನಕ್ಕೆ ನಾನು ಎಂದಿಗೂ ನಡು ನೀರಿನಲ್ಲಿ ಕೈ ಬಿಡುವುದಿಲ್ಲ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಶರತ್ ಬಚ್ಚೇಗೌಡ ಬೆಂಬಲಿಗರಿಗೆ ಹಾಗೂ ಕಾರ್ಯಜಕರ್ತರಿಗೆ ಹೇಳಿದ್ದಾರೆ.
ಹೊಸಕೋಟೆ ತಾಲ್ಲೂಕಿನ ಸ್ವ ಗ್ರಾಮದ ಬೆಂಡಿಗಾನಹಳ್ಳಿಯಲ್ಲಿ ಸೂಲಿಬೆಲೆ, ನಂದುಗುಡಿ ಹೋಬಳಿ ಅನುಗೊಂಡನಹಳ್ಳಿ ಹೋಬಳಿ ಮಟ್ಟದ ಸ್ವಾಭಿಮಾನಿ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮಾಜಿ ಸಚಿವರಾಧ ಚಿಕ್ಕೇಗೌಡ ಹಾಗೂ ಬಚ್ಚೇಗೌಡ ಹುಲಿಗಳಂತೆ ರಾಜಕಾರಣ ಮಾಡಿದರು ಹಾಲಿ ರಾಜಕಾರಣಿ ಗುಳ್ಳೆನರಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಅನರ್ಹ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು .
ಹೊಸಕೋಟೆ ತಾಲ್ಲೂಕಿನ ಸರ್ಕಾರಿ ಕಚೇರಿಗಳನ್ನು ವಸೂಲಾತಿ ಕೇಂದ್ರ ಗಳನ್ನಾಗಿ ಮಾಡಿಕೊಂಡಿದ್ದು, ತಾಲ್ಲೂಕಿನ ಜನತೆಯನ್ನು ಬಿಕ್ಷುಕರಂತೆ ಕಾಣಲು ಪ್ರಾರಂಭಿಸಿದ್ದಾರೆ, ಹಣ ಬಿಸಾಕಿದರೆ ಓಟ್ ಹಾಕ್ತಾರೆ ಎಂಬ ಅಹಂ ಸಲ್ಲದು, ರಾಜಕಾರಣ ಪ್ರಜಾಪ್ರಭುತ್ವ ಉಳಿವಿಗಾಗಿ ಹಾಗೂ ಜನಸೇವೆಗಾಗಿ ಮೀಸ ಲಾಗ ಬೇಕು ಸ್ವಾರ್ಥಕ್ಕಾಗಿ ಅಲ್ಲ ಎಂದು ಗುಡುಗಿದರು. ಬೆಮಲ್ ನಿರ್ದೇಶಕ ಸಿ .ಮಂಜುನಾಥ್ ಮಾತನಾಡಿ, ನಾವು ತಾಲ್ಲೂಕು ಬಿಟ್ಟು ಕೊಡಲು ಸಿದ್ಧರಿಲ್ಲ ಅನರ್ಹರಿಗೆ
ಎಂಎಲ್ಸಿ ಮಾಡಿ, ಮಂತ್ರಿ ಮಾಡಿದರೂ ನಮ್ಮ ಅಭ್ಯಂತರವಿಲ್ಲ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಿಡುವುದಿಲ್ಲ ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ಬಿ.ಎಂ ನಾರಾಯಣಸ್ವಾಮಿ, ತಾವರೆಕೆರೆ ಚನ್ನಬಸಪ್ಪ, ತಾ.ಪಂ.ಮಾಜಿ ಸದಸ್ಯ ಗೋಪಾಲಪ್ಪ, ಸೂಲಿಬೆಲೆ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ ಎ .ಸತೀಶಗೌಡ, ತಾ ಪಂ ಮಾಜಿ ಅಧ್ಯಕ್ಷ ಬಿ.ವಿ.ರಾಜ ಶೇಖರಗೌಡ ಸೇರಿದಂತೆ ಸುಮಾರು 4 ಸಾವಿರಕ್ಕೂ ಅಧಿಕ ಸ್ವಾಭಿಮಾನಿ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.