ಬೆಂಗಳೂರು ಮೆಟ್ರೋ ರೈಲು ನಿಗಮದ ನಿರ್ಲಕ್ಷ್ಯದ ವಿರುದ್ಧ ಐಟಿ ಉದ್ಯೋಗಿಗಳು ಸಿಡಿದೆದ್ದಿದ್ದು!

ಬೆಂಗಳೂರು ಮೆಟ್ರೋ ರೈಲು ನಿಗಮದ ನಿರ್ಲಕ್ಷ್ಯದ ವಿರುದ್ಧ ಐಟಿ ಉದ್ಯೋಗಿಗಳು ಸಿಡಿದೆದ್ದಿದ್ದು!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರು ಬಸ್ಸುಗಳಿಗಿಂತ ಜಾಸ್ತಿ ಮೆಟ್ರೋ ವನ್ನು ಬಳಸುತ್ತಿದ್ದಾರೆ ಮೆಟ್ರೋದಲ್ಲಿ ನಾವು ಪ್ರಯಾಣ ಮಾಡುವುದರಿಂದ ನಮ್ಮ ಸಮಯ ಉಳಿತಾಯವಾಗುತ್ತದೆ ಹಾಗೂ ಸರಿಯಾದ ಸಮಯಕ್ಕೆ ಆಫೀಸ್ ಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಹೋಗಬಹುದು ಅದರಿಂದ ಜನರು ದಿನನಿತ್ಯ ಮೆಟ್ರೋ ರೈಲಿಗೆ ಅವಲಂಬಿತರಾಗಿದ್ದಾರೆ.

ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ‌ ಮಾರ್ಗ ಆರಂಭಕ್ಕೆ BMRCLಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಇದೀಗ ಈ ವಿಚಾರ ರಾಷ್ಷ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬೆಂಗಳೂರು ಮೆಟ್ರೋ ರೈಲು ನಿಗಮದ ನಿರ್ಲಕ್ಷ್ಯದ ವಿರುದ್ಧ ಐಟಿ ಉದ್ಯೋಗಿಗಳು ಸಿಡಿದೆದ್ದಿದ್ದು, ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ಆರಂಭಕ್ಕೆ ಎಕ್ಸ್ ನಲ್ಲಿ(ಟ್ವಿಟರ್) ಅಭಿಯಾನ ಆರಂಭಿಸಿದ್ದಾರೆ #StartPurpleLineOperations ಎಂದು ಹ್ಯಾಷ್ ಟ್ಯಾಗ್ ಹಾಕಿ ಕ್ಯಾಂಪೇನ್ ಮಾಡಿದ್ದು, ಸಾವಿರಾರು ಜನರಿಂದ ಟ್ವೀಟ್ ಮಾಡಿ ಬಿಎಂಆರ್ ಸಿಎಲ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

ಈ ಮೂಲಕ ಬಿಎಂಆರ್‌ಸಿಎಲ್ ಅಧಿಕಾರಿಗಳ ಬೇಜಾಬ್ದಾರಿ ವಿರುದ್ಧ ಟ್ವೀಟ್ ಮಾಡಿ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟು ಮಾತ್ರವಲ್ಲ ಸಿಎಂ, ಡಿಸಿಎಂ, ಪ್ರಧಾನಿ ಮೋದಿಗೆ ಟ್ಯಾಗ್ ಮಾಡಿ ಶೀಘ್ರ ಮೆಟ್ರೋ ಆರಂಭಿಸುವಂತೆ ಆಗ್ರಹಿಸಿದ್ದಾರೆ. ಟ್ರಾಫಿಕ್ ಜಾಮ್ ವಿಡಿಯೋ, ಫೋಟೋ, ಜೊತೆಗೆ ಸ್ಕೈವಾಕ್ ಮೇಲೆ ಜನರೇ ತುಂಬಿರುವ ವಿಡಿಯೋ ಹಾಕಿ ಕಿಡಿ ಕಾರಿದ್ದಾರೆ.ಹೀಗಾಗಿ ಬಿಎಂಆರ್ ಸಿಎಲ್ ನಿರ್ಲಕ್ಷ್ಯದಿಂದ ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಆಗುತ್ತಿದೆ. ದೆಹಲಿಯ ಮೆಟ್ರೋ ರೇಲ್ವೆ ಸುರಕ್ಷತಾ ಆಯುಕ್ತರಿಂದ ಗ್ರೀನ್ ಸಿಗ್ನಲ್ ಸಿಕ್ಕರೂ ಯಾಕೆ ವಿಳಂಬ? ಎಂಬ ಪ್ರಶ್ನೆ ಎದ್ದಿದೆ. ಈ ಲೈನ್‌ನ ಎಲ್ಲಾ ಕೆಲಸ‌ ಮುಗಿದಿದ್ದರೂ ಬಿಎಂಆರ್ ಸಿಎಲ್ ಉದ್ಘಾಟನೆ‌ ದಿನಾಂಕ‌ ಮುಂದೂಡುತ್ತಿದೆ. ಈ ಬಗ್ಗೆ ಕೇಳಿದರೆ ದಿನಾಂಕ ಫಿಕ್ಸ್‌ ಆಗಿಲ್ಲ ಹೇಳ್ತೇವೆ ಎಂದಷ್ಟೇ ಬಿಎಂಆರ್ ಸಿಎಲ್ ಅಧಿಕಾರಿಗಳು ಉತ್ತರ ನೀಡ್ತಿದ್ದಾರೆ.

ವೈಟ್‌ ಫೀಲ್ಡ್‌ ಕಡೆಗೆ ತೆರಳಲು ಬೈಯಪ್ಪನಹಳ್ಳಿಯಲ್ಲಿ ಇಳಿದು 2 ಕಿ.ಮೀ. ಜನ ಬಸ್‌ನಲ್ಲಿ ಸಾಗುತ್ತಿದ್ದಾರೆ. ಮತ್ತೆ ಕೆ.ಆರ್.ಪುರದಲ್ಲಿ ಮೆಟ್ರೋ ಹತ್ತಿ ಮುಂದೆ ಪ್ರಯಾಣಿಸಬೇಕು. ಇದರಿಂದ ಮೆಟ್ರೊ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಆಗುತ್ತಿದೆ. ನಿತ್ಯ ಇಡೀ ರಸ್ತೆ ಜಾಮ್ ಆಗಿ ನೊಂದಿರುವ ಐಟಿ‌ ಉದ್ಯೋಗಿಗಳು ಈಗ ಅಭಿಯಾನ ಆರಂಭಿಸಿದ್ದಾರೆ. ಆಗಸ್ಟ್ ಮೂರನೇ ವಾರದಲ್ಲಿ ಮಿಸ್ಸಿಂಗ್ ಲಿಂಕ್ ಮೇಟ್ರೋ ಮಾರ್ಗ ಆರಂಭಿಸುವುದಾಗಿ ಬಿಎಂಆರ್ಸಿಎಲ್ ಹೇಳಿತ್ತು. ಆದರೆ ಆರಂಭ ಮಾತ್ರ ಆಗಲೇ ಇಲ್ಲ.

ಫ್ರೆಶ್ ನ್ಯೂಸ್

Latest Posts

Featured Videos