ಹುತಾತ್ಮ ಯೋಧ ಗುರು ಪತ್ನಿಗೆ ಕೆಎಸ್ಆರ್ಟಿಸಿಯಿಂದ 25,000 ಸಾವಿರ, ಉಚಿತ ಬಸ್ ಪಾಸ್!

ಹುತಾತ್ಮ ಯೋಧ ಗುರು ಪತ್ನಿಗೆ ಕೆಎಸ್ಆರ್ಟಿಸಿಯಿಂದ 25,000 ಸಾವಿರ, ಉಚಿತ ಬಸ್ ಪಾಸ್!

ಬೆಂಗಳೂರು, ಮಾ.8, ನ್ಯೂಸ್ ಎಕ್ಸ್ ಪ್ರೆಸ್: ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಹೆಚ್. ಗುರು ಅವರ ಪತ್ನಿ ಕಲಾವತಿ ಅವರಿಗೆ ನಿಗಮದ ವತಿಯಿಂದ 25,000 ರೂ. ನಗದು, ಉಚಿತ ಬಸ್‍ಪಾಸ್ ನೀಡಿ ಕೆಎಸ್‍ಆರ್‍ಟಿಸಿ ಗೌರವ ಸಮರ್ಪಣೆ ಮಾಡಿದೆ.

ಅಲ್ಲದೆ, ಗುರು ಅವರ ತಾಯಿ ಚಿಕ್ಕತಾಯಮ್ಮ ಹಾಗೂ ತಂದೆ ಹೊನ್ನಯ್ಯ ಅವರಿಗೂ ಉಚಿತ ಬಸ್ ಪಾಸ್ ನೀಡಿ ಗೌರವ ಸಮರ್ಪಣೆ ಮಾಡಲಾಯಿತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ 17 ವಿಭಾಗದಿಂದ ಒಬ್ಬ ಮಹಿಳಾ ನಿರ್ವಾಹಕಿ ಮತ್ತುಒಬ್ಬ ಮಹಿಳಾ ತಾಂತ್ರಿಕ ಸಿಬ್ಬಂದಿ ಹಾಗೂ ಭದ್ರತಾ ರಕ್ಷಕಿ ಸೇರಿ 49 ಮಂದಿಗೆ ಸನ್ಮಾನ ಮಾಡಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos