ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿಗೆ
ರಾಜ್ಯ ಮಾನವ ಹಕ್ಕು ಆಯೋಗ
ದಿಢೀರ್ ಭೇಟಿ ನೀಡಿದೆ.
ಜೈಲಿನಲ್ಲಿ
ಕೈದಿಗಳು, ವಿಚಾಣಾಧೀನ ಕೈದಿಗಳು ಹಾಗೂ ಆರೋಪಿಗಳನ್ನು
ಭೇಟಿ ಮಾಡಿ, ಜೈಲಿನಲ್ಲಿನ ಕುಂದು ಕೊರತೆಗಳು, ಕೈದಿಗಳ
ಸಮಸ್ಯೆಗಳನ್ನು ಅವರಿಂದಲೇ ಆಯೋಗ ಮಾಹಿತಿ ಪಡೆಯುತ್ತಿದೆ.
ರಾಜ್ಯ ಮಾನವ ಹಕ್ಕು ಆಯೋಗದ
ಅಧ್ಯಕ್ಷ ನಿವೃತ್ತ
ನ್ಯಾ.ಧೀರೇಂದ್ರ ವಘೇಲಾ, ರಾಜ್ಯ ಮಾನವ
ಹಕ್ಕು ಆಯೋಗದ ಸದಸ್ಯ ಆರ್ ಕೆ
ದತ್ತಾ ಸೇರಿ ಮೂವರನ್ನೊಳಗೊಂಡಿದೆ. ಜೈಲಿನಲ್ಲಿರುವವರಿಗೆ ಮೂಲಭೂತಸೌಕರ್ಯಗಳ ಕೊರತೆ ಇದೆಯಾ…? ಯಾರಾದರು
ಮಾನಸಿಕ ಹಾಗೂ ದೈಹಿಕ ಕಿರುಕುಳ
ಅನುಭವಿಸುತ್ತಿದ್ದಾರಾ…? ಜೈಲಿನೊಳಗೆ ಯಾವುದಾದರು ಅಕ್ರಮ ಚಟುವಟಿಕೆಗಳು ನಡೆತ್ತಿವೆಯಾ…?
ಜೈಲಿನಲ್ಲಿರುವವರಿಗೆ ಭದ್ರತಾ ಸಮಸ್ಯೆ ಇದೆಯೆ..?
ಎಂದು ಮಾಹಿತಿ ಪಡೆಯಲಾಗುತ್ತಿದೆ.
ಆಯೋಗದ ಪ್ರಶ್ನೆಗಳಿಗೆ ಜೈಲು ಸಿಬ್ಬಂದಿ ಸರ್ಪ್ರೈಸ್ ವಿಸಿಟ್ ಗೆ ತಬ್ಬಿಬ್ಬಾಗಿದೆ.