ಹುಬ್ಬಳ್ಳಿ: ವೈಕುಂಠ ಏಕಾದಶಿ ಸಂಭ್ರಮದಿಂದ‌ ಆಚರಣೆ

ಹುಬ್ಬಳ್ಳಿ: ವೈಕುಂಠ ಏಕಾದಶಿ ಸಂಭ್ರಮದಿಂದ‌ ಆಚರಣೆ

ಹುಬ್ಬಳ್ಳಿ, . 06:  ಹುಬ್ಬಳ್ಳಿ ನಗರದಲ್ಲಿ ವೈಕುಂಠ ಏಕಾದಶಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರದ ವಿವಿಧ ದೇವಸ್ಥಾನಗಳಲ್ಲಿ ಧಾರ್ಮಿಕ  ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಯಾಪುರದ ಇಸ್ಕಾನ್‌ ಮಂದಿರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸ್ವರ್ಣ ಬಣ್ಣ ಲೇಪಿತ ಭವ್ಯ ವೈಕುಂಠ ದ್ವಾರವನ್ನು ಪ್ರತಿಷ್ಠಾಪಣೆ ಮಾಡಲಾಗಿದೆ.

ವೈಕುಂಠ ದ್ವಾರ ಪ್ರವೇಶಿಸಿ ವೆಂಕಟೇಶ್ವರ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಣ್ಣ ಬಣ್ಣದ ಸುಗಂಧಿತ ಪುಷ್ಪಗಳಿಂದ ಕೃಷ್ಣ, ಬಲರಾಮರನ್ನು ಅಲಂಕರಿಸಲಾಗಿದೆ. ಭಗವಂತನ ನಾಮವನ್ನು ಒಂದು ಲಕ್ಷ ಬಾರಿ ಜಪಿಸುವ ಲಕ್ಷಾರ್ಚನೆ ಸೇವೆ ಆಯೋಜಿಸಲಾಗಿದೆ. ಶ್ರೀನಿವಾಸ ಗೋವಿಂದನ ಪ್ರತಿಮೆಗೆ ವಿಶೇಷ ಪೂಜೆ ನಡೆಯುತ್ತಿದೆ. ಪವಿತ್ರ ಏಕಾದಶಿ ಸಂದರ್ಭದಲ್ಲಿ ಮಂಗಳಕರವಾದ ವೆಂಕಟೇಶ್ವರ ಹೋಮ‌ ನಡೆಸಲಾಗುತ್ತಿದೆ.

ಇಸ್ಕಾನ್‌ನಿಂದ ಭಜನೆ, ನೃತ್ಯ, ನಾಟಕ ಮತ್ತು ಭಕ್ತಿ ಸಂಗೀತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗಿದೆ. ಬರುವ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದ್ದು ಸಹಸ್ರಾರು ಹರಿ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos