ಮಂಗಳೂರು, ಮೇ. 6, ನ್ಯೂಸ್ ಎಕ್ಸ್ ಪ್ರೆಸ್: ಎಚ್ ಪಿಸಿಎಲ್ ಗ್ಯಾಸ್ ಲೈನ್ ಗಾಗಿ ಜಮೀನು ಬಿಟ್ಟು ಕೊಟ್ಟ ಕೃಷಿಕರಿಗೆ ಕಂಪೆನಿ ಮೋಸ ಮಾಡಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಎಚ್ ಪಿಸಿಎಲ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಪರಪ್ಪು ಎಂಬಲ್ಲಿ ಪ್ರತಿಭಟನೆ ನಡೆದಿದೆ.
ಎಚ್ ಪಿಸಿಎಲ್ ಗ್ಯಾಸ್ ಲೈನ್ ಗಾಗಿ ಸ್ಥಳೀಯ ಕೃಷಿಕರು ತಮ್ಮ ಕೃಷಿ ಭೂಮಿಯನ್ನು ಬಿಟ್ಟು ಕೊಟ್ಟಿದ್ದು, ಒಪ್ಪಂದದ ಪ್ರಕಾರ ಎಚ್ ಪಿಸಿಎಲ್ ಅಧಿಕಾರಿಗಳು ಭೂ ಮಾಲೀಕರಿಗೆ ಉದ್ಯೋಗದ ಭರವಸೆ ನೀಡಿದ್ದರು. ಅದರಂತೆಯೇ ಸಂಸ್ಥೆ ಕೆಲಸವೂ ನೀಡಿತ್ತು.ಆದರೆ ಈಗ ಏಕಾಏಕಿ ಕಂಪೆನಿ ಕೆಲಸಗಾರರನ್ನು ತೆಗೆದುಹಾಕಲು ಹೊರಟಿದೆ ಎಂದು ಆರೋಪಿಸಲಾಗಿದೆ.
ಕಂಪೆನಿ ಮೋಸದಿಂದ ಬೇಸತ್ತ ಕೆಲಸಗಾರರು ಎಚ್ ಪಿಸಿಎಲ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.