ಮನಸ್ಸಿಗೆ ಮುದ ನೀಡುವ ‘ಎತ್ತಿನ ಭುಜ’

ಮನಸ್ಸಿಗೆ ಮುದ ನೀಡುವ ‘ಎತ್ತಿನ ಭುಜ’

ಚಿಕ್ಕಮಗಳೂರು, ಅ. 28 : ಕಾಫೀ ನಾಡಿನ ಬೆಟ್ಟದಲ್ಲಿ ಚಾರಣ ಮಾಡೋದಕ್ಕೆ ಇಲ್ಲೊಂದು ಅದ್ಬುತ ಬೆಟ್ಟವಿದೆ. ಇದನ್ನು ಚಾರಣಿಗರ ಬೆಟ್ಟ ಅಂತಾನೆ ಫೇಮಸ್ಸ್ ಮೂಡಿಗೇರೆಯಿಂದಾ 28 ಕೀಮಿ ದೂರದಲ್ಲಿರುವ ಶಿಶಿಲ ಬೆಟ್ಟವೇ ಪೇವರೇಟ್ . ಕಾಫಿನಾಡಲ್ಲಿ ಚಾರಣ ಮಾಡೋವಂತ ಪ್ರವಾಸಿಗರಿಗೆ ಇಲ್ಲೊಂದು ಅವರ ಮನಸ್ಸಿಗೆ ಇಡಿಸುವ ಮುದ ನೀಡುವ ಎಂದು ಮರೆದಂತಹ ಸ್ವಾಟ್ ಇದೆ. ಇದೆ ಶಶಿಲ ಬೇಟ್ಟವೆ ಚಾರಣಿಗರ ಸ್ವರ್ಗ.
ಸೌಂದರ್ಯ ಬಣ್ಣಿಸೋಕೆ ಪದಪುಂಜವೇ ಸಾಲದಂತಹ ಪ್ರವಾಸಿ ತಾಣವೊಂದು ಕಾಫಿನಾಡಿನಲ್ಲಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾಲುಬೆಟ್ಟಗಳ ಸಾಲಿನಲ್ಲಿರುವ ‘ಎತ್ತಿನ ಭುಜ’ ಬೆಟ್ಟ.
ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಪಾಲಿನ ಅಕ್ಷಯಪಾತ್ರೆ ಇದ್ದಂತೆ. ಇಲ್ಲಿನ ನಿಸರ್ಗ ವೈಭವ ನೋಡುಗರ ಕಣ್ಮನ ತಣಿಸುತ್ತದೆ.
ಭೂಲೋಕದ ಸ್ವರ್ಗವೆನಿಸಿರೋ ಈ ನೆಲದಲ್ಲಿ ಮೂಡಿಗೆರೆಯ ಶಿಶಿಲಗುಡ್ಡ ಕೂಡ ಒಂದು. ದೂರದಿಂದ ನೋಡಿದರೆ ಇದು ಎತ್ತಿನಭುಜದಂತೆ ಕಾಣುತ್ತೆ, ಹೀಗಾಗಿ ಈ ಗುಡ್ಡವನ್ನು ಎತ್ತಿನಭುಜ ಅಂತ ಕರೀತಾರೆ. ಬೈರಾಪುರದಿಂದ 4 ಕಿ.ಮೀ ದೂರದಲ್ಲಿರೋ ಈ ಬೆಟ್ಟವನ್ನು ನಡೆದೇ ಏರಬೇಕು. ಕಡಿದಾದ ರಸ್ತೆಯಲ್ಲಿ ಕಲ್ಲು-ಮಣ್ಣು ಎನ್ನದೇ ಗುಡ್ಡ ಹತ್ತಬೇಕು. ಸಿಕ್ಕಾಪಟ್ಟೆ ಕಷ್ಟಪಟ್ಟು ಬೆಟ್ಟ ಏರಿದರೆ ಅಪರೂಪದ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
9 ಗುಡ್ಡಗಳ ಮಧ್ಯೆ ಇರೋ ಎತ್ತಿನಭುಜದ ಹತ್ತಿ ನಿಂತರೆ ಯಾವುದೋ ದ್ವೀಪದಲ್ಲಿ ನಿಂತ ಹಾಗೆ ಆಗುತ್ತೆ. ಆಕಾಶಕ್ಕೆ ಮೂರೇ ಗೇಣು ಅನ್ನೋ ಅನುಭವ ಇಲ್ಲಿ ಬರುವ ಪ್ರಕೃತಿ ಪ್ರೇಮಿಗಳಿಗೆ ಆಗುತ್ತದೆ. ಎತ್ತಿನಭುಜದ ಮೇಲೆ ಫೋಟೋ ಕ್ಲಿಕ್ಕಿಸಿ, ಸೆಲ್ಫಿ ತಗೊಂಡರೆ ಇಲ್ಲಿ ಭೇಟಿ ಕೊಟ್ಟು ಎಂಜಾಯ್ ಮಾಡಿದ ನೆನಪು ಸದಾ ಹಸಿರಾಗಿರುತ್ತದೆ. ಬಿಸಿಲಿದ್ದಾಗ ಬೆಟ್ಟದ ವಿಹಂಗಮ ನೋಟ, ಪ್ರಕೃತಿ ತುಂಬೆಲ್ಲಾ ಹರಡೋ ಮಂಜಿನ ಮಧ್ಯೆ ನಿಂತಾಗ ಪ್ರವಾಸಿಗರಿಗೆ ಆಕಾಶದಲ್ಲೇ ತೇಲಿದ ಅನುಭವ ಆಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos