ಹುಬ್ಬಳ್ಳಿ, ಮೇ. 14, ನ್ಯೂಸ್ ಎಕ್ಸ್ ಪ್ರೆಸ್: ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಕಳೆದ ರಾತ್ರಿ ಮನೆ ಕುಸಿದಿದೆ. ಪರಿಣಾಮ ಅಜ್ಜಿ ಸೇರಿದಂತೆ ಇಬ್ಬರು ಮೊಮ್ಮಕ್ಕಳು ಸಾವನ್ನಪ್ಪಿದ್ದಾರೆ. ಕುಟುಂಬದ ಮತ್ತೋರ್ವ ಸದಸ್ಯನಿಗೆ ಗಂಭೀರ ಗಾಯಗಳಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಆಸ್ಪತ್ರೆಗೆ ಸೇರಿಸಲಾಗಿದೆ. ಮೃತಪಟ್ಟವರು ಯಲ್ಲವ್ವ ಗಾಡದ (56) ಮೊಮ್ಮಕ್ಕಳಾದ ಜ್ಯೋತಿ ಮೇಟಿ(9) ಮತ್ತು ಶ್ರಾವಣಿ ರಾದಾಯಿ (4) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುಂದಗೋಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಆಗಮಿಸಿ ಸಾಂತ್ವಾನ ಹೇಳಿದ್ರು. ಇದೇ ವೇಳೆ ಅವರು ಮಕ್ಕಳ ಶವಗಳ ಮಂದೆ ಕಣ್ಣೀರಿಟ್ಟ ಘಟನೆ ಕೂಡಾ ನಡೆಯಿತು.