ಹೋಟೆಲ್ ಬಿಲ್ ಕಟ್ಟದೇ ಪರಾರಿ ಆದ ನಟಿ ಪೂಜಾಗಾಂಧಿ

ಹೋಟೆಲ್ ಬಿಲ್ ಕಟ್ಟದೇ ಪರಾರಿ ಆದ ನಟಿ ಪೂಜಾಗಾಂಧಿ

ಬೆಂಗಳೂರು,ಮಾ.19, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡ ಚಿತ್ರರಂಗದ ಖ್ಯಾತ ನಟಿ ‘ಮುಂಗಾರು ಮಳೆ’ ಖ್ಯಾತಿಯ ಪೂಜಾಗಾಂಧಿ  ಹೋಟೆಲ್ ಬಿಲ್ ಕಟ್ಟದೇ ಪರಾರಿ ಆಗಿದ್ದಾರೆ ಎಂದು ಅವರ ಮೇಲೆ ದೂರು ದಾಖಲಾಗಿದೆ.

ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಪೂಜಾಗಾಂಧಿ ಕೆಲವು ದಿನ ಉಳಿದುಕೊಂಡಿದ್ದರು.

ಆದರೆ, ಹೋಟೆಲ್ ಬಿಲ್ ಕಟ್ಟದೇ ಅಲ್ಲಿಂದ ಪರಾರಿ ಆಗಿದ್ದರು. ಲಕ್ಷ ಲಕ್ಷ ಬಿಲ್ ಮಾಡಿ ಯಾರಿಗೂ ಗೊತ್ತಾಗದೇ ಪರಾರಿ ಆಗಿದ್ದಾರಂತೆ.

ಕನ್ನಡ ಸ್ಟಾರ್ ನಟಿ ಪೂಜಾಗಾಂಧಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೂಜಾಗಾಂಧಿ ಒಟ್ಟು 4.5 ಲಕ್ಷ ಬಿಲ್ ಮಾಡಿದ್ದರು.

ದೂರು ದಾಖಲಿಸಿಕೊಂಡಿದ್ದ ಪೊಲೀಸ್ ಪೂಜಾಗಾಂಧಿ ಯನ್ನು ಸ್ಟೇಷನ್ ಗೆ ಕರಿಸಿದ್ದರು. ಪೊಲೀಸರ ಸಮ್ಮುಖದಲ್ಲಿ ಎರಡು ಲಕ್ಷ ನೀಡಿದ್ದ ನಟಿ ಪೂಜಾಗಾಂಧಿ ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos