ಹೂತಿಟ್ಟ ಶವದ ರುಂಡವನ್ನೇ ಕತ್ತರಿಸಿಕೊಂಡು ಹೋದ ದುಷ್ಕರ್ಮಿಗಳು!

ಹೂತಿಟ್ಟ ಶವದ ರುಂಡವನ್ನೇ ಕತ್ತರಿಸಿಕೊಂಡು ಹೋದ ದುಷ್ಕರ್ಮಿಗಳು!

ಬೆಂಗಳೂರು, ಮಾ.6, ನ್ಯೂಸ್ ಎಕ್ಸ್ ಪ್ರೆಸ್:  ಸ್ಮಶಾನದಲ್ಲಿ ಹೂತಿಟ್ಟ ಶವವನ್ನು ಮತ್ತೆ ಹೊರತೆಗೆದು ಶವದ ತಲೆಯನ್ನೇ ಕತ್ತರಿಸಿಕೊಂಡು ಹೋಗಿರುವ ಘಟನೆ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೈರನಹಳ್ಳಿಯಲ್ಲಿ ನಡೆದಿದೆ.

ಕಳೆದ 2 ತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಅರಸಪ್ಪ (85) ಎಂಬುವರು ಮೃತಪಟ್ಟಿದ್ದರು. ಊರ ಹೊರಗಿರುವ ಸ್ಮಶಾನದಲ್ಲಿ ಮೃತ  ದೇಹದ ಅಂತ್ಯಕ್ರಿಯೆನ್ನು ನೆರೆವೇರಿಸಲಾಗಿತ್ತು. ಆದರೆ, ಕಳೆದ ಅಮವಾಸ್ಯೆಎಂದು  ಮದ್ಯ ರಾತ್ರಿ ಶವವನ್ನು ದುಷ್ಕರ್ಮಿಗಳು ಹೊರ ತೆಗೆದು ರುಂಡವನ್ನು ಕತ್ತರಿಸಿಕೊಂಡು ಹೋಗಿದ್ದಾರೆ.

ಕೆಲ ದಿನಗಳ ಹಿಂದೆ 1 ತಿಂಗಳ ತಿಥಿ ಕಾರ್ಯವನ್ನು ಕುಟುಂಬದವರು ಕೈಗೊಂಡ, ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿರುವುದು ಅತ್ಯಂತ ಆತಂಕ ಮುಡಿಸುವ ಸಂಗತಿ ಎಂದು ಕುಟುಂಬದವರು ಹೇಳಿದ್ದಾರೆ. ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos