ಮನೆ ಮನೆ ಭೇಟಿ, ಜೆಡಿಎಸ್ ಗೆಲ್ಲಿಸಿ: ಶಾಸಕ

ಮನೆ ಮನೆ ಭೇಟಿ, ಜೆಡಿಎಸ್ ಗೆಲ್ಲಿಸಿ: ಶಾಸಕ

ದೇವನಹಳ್ಳಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕೆಂದರೆ ಒಂದೊಂದು ಮತವೂ ಮುಖ್ಯವಾಗಿದ್ದು, ಪಕ್ಷದ ಮುಖಂಡರೂ ಅಭ್ಯರ್ಥಿಗಳು ಒಗ್ಗೂಡಿ ಮತದಾರರನ್ನು ಮನವೊಲಿಸಿಕೊಂಡು ಗ್ರಾಪಂನ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪರ ಮತಯಾಚಿಸಬೇಕು ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ಅಗಲಕೋಟೆ ಆಂಜನೇಯಸ್ವಾಮಿ ಆವರಣದಲ್ಲಿ ಚನ್ನಹಳ್ಳಿ ಗ್ರಾಪಂ ಪೂರ್ವಬಾವಿ ಸಭೆಯಲ್ಲಿ ಮಾತನಾಡಿ, ಬೇರೆ ಚುನಾವಣೆಗಳಲ್ಲಿ ಇನ್ನೊಂದು ಬೂತ್‌ಗಳಲ್ಲಿ ಮತ ಬರುತ್ತದೆ ಎಂಬ ನಂಬಿಕೆ ಇರುತ್ತದೆ. ಆದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯಾ ಗ್ರಾಮದ ಒಂದೊಂದು ಮತವೂ ಅತಿ ಮುಖ್ಯ ಎಂದು ಸೋಲು ಗೆಲುವು ಎರಡೂ ಮೂರು ಮತಗಳ ಅಂತರದಲ್ಲಿ ಗೆಲ್ಲಲು ಸಹಕಾರಿಯಾಗುತ್ತದೆ. ನಾವು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಆಧ್ಯತೆ ನೀಡಿದ್ದೇವೆ. ನಿಮ್ಮ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ ಎಂಬುವುದು ಧೈರ್ಯದಿಂದ ಮತ ಕೇಳಿ ಚನ್ನಹಳ್ಳಿ ಗ್ರಾಪಂನ 11 ಸ್ಥಾನಗಳು ಗೆಲ್ಲಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಗ್ರಾಮಗಳಲ್ಲಿ ಯಾರೇ ಅಭ್ಯರ್ಥಿ ಆಗಲೀ ನಮ್ಮ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದಕ್ಕೆ ಎಲ್ಲರೂ ಒಗ್ಗಟ್ಟಾಗಿದ್ದರೆ ಯಾವುದೂ ಅಸಾಧ್ಯವಲ್ಲ ಎಂದರು.
ಹೋಬಳಿ ಅಧ್ಯಕ್ಷ ಮುನಿರಾಜ್ ಮಾತನಾಡಿ, ಶಾಸಕರ ಹೆಚ್ಚು ಅನುದಾನ ನೀಡಿದ್ದು, ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ. ನಾವೇ ಶಾಸಕರು ಮುಖಂಡರು ಎಂದು ಭಾವಿಸಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಸಿ ಗ್ರಾಪಂನಿಂದ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos