ಹಾಲಿ-ಮಾಜಿ ಸಿಎಂಗಳ ನಡುವೆ ಕಿತ್ತಾಟ

ಹಾಲಿ-ಮಾಜಿ ಸಿಎಂಗಳ ನಡುವೆ ಕಿತ್ತಾಟ

ಬೆಂಗಳೂರು, ಡಿ. 27 : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ನಿವಾಸವನ್ನ ಖಾಲಿ ಮಾಡೋ ಲಕ್ಷಣವೇ ಕಾಣುತ್ತಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸರ್ಕಾರ ಬೇರೆ ಸರ್ಕಾರಿ ನಿವಾಸ ಕೊಟ್ಟರೂ ಕಾವೇರಿ ನಿವಾಸವನ್ನ ಇನ್ನೂ ಖಾಲಿ ಮಾಡಿಲ್ಲ. ಡಿಸೆಂಬರ್ ವೇಳೆಗೆ ಖಾಲಿ ಮಾಡೋದಾಗಿ ಹೇಳಿದ್ದ ಸಿದ್ದರಾಮಯ್ಯ, ಈಗ ಯೂಟರ್ನ್ ಹೊಡೆದಿದ್ದಾರಂತೆ. ಸದ್ಯಕ್ಕೆ ನಾನು ಮನೆ ಖಾಲಿ ಮಾಡೊಲ್ಲ ಅಂತ ಹಠಕ್ಕೆ ಬಿದ್ದಿದ್ದು, ಸಿಎಂ ಯಡಿಯೂರಪ್ಪಗೆ ಸರ್ಕಾರಿ ಬಂಗಲೆ ಇಲ್ಲದೆ ತಮ್ಮ ಖಾಸಗಿ ಮನೆಯಿಂದಾನೆ ಓಡಾಡುತ್ತಿದ್ದಾರೆ.
ಸಿದ್ದರಾಮಯ್ಯ ಸಿಎಂ ಆದಾಗಿನಿಂದ ಸಮ್ಮಿಶ್ರ ಸರ್ಕಾರ ಬಂದಾಗಲು ಇದೇ ಬಂಗಲೆಯಲ್ಲಿ ಮುಂದುವರಿದಿದ್ದಾರೆ. ತಮಗೆ ಕಾವೇರಿ ಲಕ್ಕಿ ಮನೆ ಅಂತ ಸಿದ್ದರಾಮಯ್ಯ ಮನೆ ಖಾಲಿ ಮಾಡೋಕೆ ಮೀನಾಮೇಷ ಏಣಿಸುತ್ತಿದ್ದಾರೆ.

ಗೃಹ ಕಚೇರಿ ಕೃಷ್ಣಗೆ ಕಾವೇರಿ ಪಕ್ಕವೇ ಇರೋದರಿಂದ ನಿತ್ಯ ಸರ್ಕಾರಿ ಕೆಲಸಗಳಿಗೆ ಅನುಕೂಲ ಆಗುತ್ತೆ ಅಂತ ಸಿಎಂ ಯಡಿಯೂರಪ್ಪ ಕಾವೇರಿಗೆ ಶಿಫ್ಟ್ ಆಗೋಕೆ ನಿರ್ಧಾರ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಮಾತ್ರ ಸದ್ಯಕ್ಕೆ ಮನೆ ಖಾಲಿ ಮಾಡೊಲ್ಲ ಅಂತ ಮೊಂಡು ಹಠಕ್ಕೆ ಬಿದ್ದಿದ್ದಾರಂತೆ. ಹೀಗಾಗಿ ಕಾವೇರಿ ಬಂಗಲೆ ಇಬ್ಬರು ನಾಯಕರ ಮಧ್ಯೆ ಮತ್ತೆ ಪ್ರತಿಷ್ಠೆ ವೇದಿಕೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos