ಭೀಕರ ರಸ್ತೆ ಅಪಘಾತ: ಹಾಕಿ ಪಟು ಸುಜಾತ ಸಾವು

ಭೀಕರ ರಸ್ತೆ ಅಪಘಾತ: ಹಾಕಿ ಪಟು ಸುಜಾತ ಸಾವು

ಧಾರವಾಡ, ಮೇ.7, ನ್ಯೂಸ್ ಎಕ್ಸ್ ಪ್ರೆಸ್: ರಸ್ತೆ ಅಪಘಾತದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ, ಕ್ರೀಡಾಪಟು ಒಬ್ಬರು ದಾರುಣ ಸಾವನ್ನಪ್ಪಿದ್ದಾರೆ. ಸುಜಾತ ಕೆರಳ್ಳಿ (೧೭) ಮೃತ ದುರ್ದೈವಿ. ಸುಜಾತಾ ತಮ್ಮ ತಂದೆಯೊಂದಿಗೆ ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದರು. ಈ ವೇಳೆ ಎಂಹೆಚ್​ 44 ಎ ಎಲ್ 6977 ನಂಬರ್​​ನ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸುಜಾತಾ ಕೆರಳ್ಳಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಸುಜಾತ ಮೈಸೂರಲ್ಲಿ ಓದುತ್ತಿದ್ದರು. ಇನ್ನು, ಅಪಘಾತ ಆದ ತಕ್ಷಣ ಕಾರನ್ನ ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಮೃತ ಸುಜಾತ, ಉತ್ತಮ ಹಾಕಿಪಟುವಾಗಿದ್ದು ಸ್ಕೂಲ್ ಗೇಮ್ಸ್​ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ 2014-15 ರಲ್ಲಿ ಆಯೋಜನೆಗೊಂಡಿದ್ದ 60ನೇ ರಾಷ್ಟ್ರೀಯ ಸ್ಕೂಲ್​ ಗೇಮ್ಸ್​ನಲ್ಲಿ ಭಾಗವಹಿಸಿದ್ದರು. ಈ ಮೂಲಕ ಸುಜಾತಾ, 17ನೇ ವಯಸ್ಸಿನೊಳಗಿನ ರಾಷ್ಟ್ರಮಟ್ಟದ ಹಾಕಿ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ಓದಿನಲ್ಲೂ ಮುಂದಿದ್ದ ಈಕೆ, ಇದೇ ವರ್ಷ ಎಸ್‌ಎಸ್‌ಎಲ್​ಸಿಯಲ್ಲಿ ಶೇ.89 ಮಾರ್ಕ್ಸ್​ ತೆಗೆದು ಪಾಸ್ ಆಗಿದ್ದರು. ಇನ್ನು, ಸುಜಾತಾ ತಂದೆ ಮಲ್ಲಿಕಾರ್ಜುನ ಕೆರಳ್ಳಿ ಸ್ಥಿತಿ ಕೂಡ ಚಿಂತಾಜನಕವಾಗಿದೆ. ಗಾಯಾಳು ಮಲ್ಲಿಕಾರ್ಜುನ ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗರಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos