ಬಿಜೆಪಿಗೆ ಟಾಂಗ್‌ ನೀಡಿದ ದಿನೇಶ್ ಗುಂಡೂರಾವ್‌

ಬಿಜೆಪಿಗೆ ಟಾಂಗ್‌ ನೀಡಿದ ದಿನೇಶ್ ಗುಂಡೂರಾವ್‌

ದಕ್ಷಿಣ ಕನ್ನಡ: ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇದೆ. ಆದರೆ ಬಿಜೆಪಿ ಗ್ಯಾರಂಟಿಗೆ ಬೆಲೆ ಇಲ್ಲ, ಅಮಿತ್‌ ಶಾ ಬಂದು ಸುಳ್ಳು ಹೇಳಿಕೊಂಡು ಹೋಗಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇವೆಂದು ಹೇಳಿ ಮಾಡಿದ್ದಾರೆಯೇ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.‌

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದರು.‌“ಡಾಲರನ್ನು 45 ರೂ.ಗೆ ಇಳಿಸುತ್ತೇವೆಂದು ಹೇಳಿದ್ದರು. ಅದೀಗ ₹83 ಆಗಿದೆ. ಜನರಿಗೆ ಮಾತನ್ನು ಕೊಟ್ಟ ಮೇಲೆ ಉಳಿಸಿಕೊಳ್ಳುವುದು ಬಹಳ ಮುಖ್ಯ. ಬಿಜೆಪಿಯವರು ಹೇಳಿದ್ದನ್ನು ಯಾವುದನ್ನಾದರೂ ಮಾಡಿದ್ದಾರೆಯೇ”ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.‌

ಸುದ್ದಿಗಾರರ ಜೊತೆ ನಿನ್ನೆ ಮಾತನಾಡಿದ ಅವರು, ‘ಚುನಾವಣಾ ಬಾಂಡ್‌ ಮೂಲಕ ಕಾನೂನುಬದ್ಧ ಭ್ರಷ್ಟಾಚಾರ ನಡೆಸಿ ಬಿಜೆಪಿ ₹ 12 ಸಾವಿರ ಕೋಟಿಯನ್ನು ಲೂಟಿ ಮಾಡಿದೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಸಿಬಿಐ ಅಧಿಕಾರಿಗಳನ್ನು ಛೂ ಬಿಟ್ಟು, ‘ದುಡ್ಡು ಕೊಡದಿದ್ದರೆ ನಿಮ್ಮನ್ನು ಮುಗಿಸುತ್ತೇವೆ’ ಎಂದು ಹೆದರಿಸಿ ಪ್ರಕರಣ ದಾಖಲಿಸಿದ, ದುಡ್ಡು ಬಂದ ಬಳಿಕ ಪ್ರಕರಣಮುಚ್ಚಿಹಾಕಿದ ಪ್ರಕರಣಗಳು ಬಯಲಾಗಿವೆ’ ಎಂದರು. ಈ ಚುನಾವಣೆ ಸರಿಸಮಾನ ವ್ಯವಸ್ಥೆಯಲ್ಲಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos