ಹಿಂದೂಸ್ಥಾನ ಒಂದು ಸುಂದರವಾದ ಹೂವಿದ್ದಂತೆ: ಮೊಹಮ್ಮದ್ ರಫಿ ಅಹ್ಮದ್

ಹಿಂದೂಸ್ಥಾನ ಒಂದು ಸುಂದರವಾದ ಹೂವಿದ್ದಂತೆ: ಮೊಹಮ್ಮದ್ ರಫಿ ಅಹ್ಮದ್

ರಾಯಚೂರು, ನ. 09: ಅಂದ್ರೂನ್ ಕಿಲ್ಲಾದ ಜಮೀಯ ಮಸೀದಿಯ ಮೌಲಾನ ಮೊಹಮ್ಮದ್ ರಫಿ ಅಹ್ಮದ್ ಅವರು ಶಾಂತಿ ಪಾಲಿಸುವಂತೆ ಕರೆ ನೀಡಿದ್ಧಾರೆ.

ಹಿಂದೂಸ್ಥಾನ ಒಂದು ಸುಂದರವಾದ ಹೂವಿದ್ದಂತೆ. ಎಲ್ಲರೂ ಒಂದಾಗಿ ಬಾಳುವೆ ಮಾಡುವ ದೇಶ. ವೈರಿ ಬಂದರೂ ಅವರಿಗೆ ಗೌರವ ಕೊಡುತ್ತೇವೆ. ಸುಪ್ರೀಂ ತೀರ್ಪು ಏನೇ ಬಂದರೂ ಸ್ವಾಗತಿಸೋಣ. ಯಾವುದೇ ಉದ್ವೇಗಕ್ಕೆ ಒಳಗಾಗದೆ ಕುರಾನ್ ಆಶಯದಂತೆ ಶಾಂತಿ ಸೌಹಾರ್ದತೆಯಿಂದ ಬದುಕೋಣ ಎಂದು ಮೌಲನಾ ಮನವಿ ಮಾಡಿದ್ದಾರೆ.

ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸದಸ್ಯ ಹಾಗೂ ಖ್ವಾಜಾ ಬಂದೇನವಾಜ್ ದರ್ಗಾದ ಪೀಠಾಧಿಪತಿ ಸೈಯದ್ ಖುಸ್ರೋ ಹುಸ್ಸೇನಿ ಅವರು ಕಲಬುರ್ಗಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ಏನೇ ತೀರ್ಪು ಕೊಟ್ಟರೂ ಅದನ್ನು ಗೌರವದಿಂದ ಕಾಣಬೇಕು. ಯಾವುದೇ ಅಹಿತಕರ ಘಟನೆಗೆ ಇಳಿಯಬಾರದು ಎಂದು ಕರೆ ನೀಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos