ಚೆನ್ನೈ, ಮೇ. 18, ನ್ಯೂಸ್ ಎಕ್ಸ್ ಪ್ರೆಸ್ : ಸ್ವತಂತ್ರ ಭಾರತದ ಮೊದಲ ‘ಹಿಂದೂ’ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಎಂದು ವಿವಾದದ ಕಿಡಿ ಹೊತ್ತಿಸಿದ್ದ ತಮಿಳು ನಟ ಹಾಗೂ ಮಕ್ಕಳ್ ನೀದಿ ಮೈಯಮ್ ಪಕ್ಷದ ಮುಖ್ಯಸ್ಥ ಕಮಲ್ ಹಸನ್, ಮತ್ತೊಂದು ಬಾಂಬ್ ಹಾಕಿದ್ದಾರೆ. ‘ಹಿಂದೂ’ ಎನ್ನುವ ಪದದ ಮೂಲ ಭಾರತವಲ್ಲ. ವಿದೇಶಿಯರಿಂದ ಬಂದದ್ದು’ ಎಂದು ಹೇಳಿದ್ದಾರೆ. ಭಾರತದಲ್ಲಿದ್ದ ಅಳ್ವಾರರು, ನಯನ್ಮಾರರು, ವೈಷ್ಣವ ಹಾಗೂ ಶೈವ ಕವಿಗಳು, ದಕ್ಷಿಣ ಭಾರತದ ಸಂತರು ‘ಹಿಂದೂ’ ಎಂಬ ಪದವನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಹಿಂದೂ ಎಂಬ ಪದವನ್ನು ಮೊಘಲರು ಇಲ್ಲವೇ ವಿದೇಶಿಯರು ನಾಮಕರಣ ಮಾಡಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ, ಕಮಲ್ ಟ್ವೀಟ್ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.