ತುರುವೇಕೆರೆ: ಅಂತರ್ಜಲ ಕೊರತೆ ನೀಗಿಸಲು ಹೇಮಾವತಿ ನಾಲೆಯಿಂದ ಈ ಬಾಗದ ಕೆರೆಕಟ್ಟೆಗಳಿಗೆ ನೀರು ಹರಿಸುವುತ್ತಿರುವುದಾಗಿ ಶಾಸಕ ಮಸಾಲಜಯರಾಮ್ ತಿಳಿಸಿದರು.
ತಾಲೂಕಿನ ಮಾಯಸಂದ್ರ ಹೋಬಳಿ ಅಜ್ಜನಹಳ್ಳಿ ಗ್ರಾಮದಿಂದ ವಡವನಘಟ್ಟರಸ್ತೆಗೆ ಸುಮಾರು ೧.೩೦ ಕೋಟಿ ರೂ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನರೆವೇರಿಸಿ ಮಾತನಾಡಿ ತಾಲೂಕಿನ ಗಡಿಭಾಗದಲ್ಲಿನ ಕೆರೆಗಳಿಗೂ ಹೇಮಾವತಿ ನೀರು ಹರಿಸಿ ತುಂಬಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಜಿಲ್ಲಾ ಉಸ್ತವಾರಿ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಈಗಾಗಲೇ ನೂರಾರು ಕೋಟಿ ರೂ ವೆಚ್ಚದ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ ಎಂದರು.
ಪುತ್ರಿ ಹರಕೆ ತೀರಿಸಿದ ಶಾಸಕ
ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನನ್ನ ಪುತ್ರಿ ಈ ಗ್ರಾಮದ ಚಿಕ್ಕಮ್ಮದೇವಿಯ ದೇವಸ್ಥಾನಕ್ಕೆ ೨೫ ಸಾವಿರ ರೂ ಹರಕೆ ನೀಡುವುದಾಗಿ ಭರವಸೆ ನೀಡಿದ್ದರಿಂದ ಆ ಹಣವನ್ನು ನಾನು ಇಂದು ಊರಿನ ಪ್ರಮುಖರಿಗೆ ನೀಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡೇರಿರಾಜಣ್ಣ, ರಮೇಶ್, ಕಲೂರು ಸುರೇಶ್, ಲೋಕೋಪಯೋಗಿ ಎ.ಇ.ಇ. ಗುರುಸಿದ್ದಪ್ಪ, ಗುತ್ತಿಗೆದಾರರಾದಅಂಬಲದೇವನಹಳ್ಳಿ ತಿಮ್ಮೇಗೌಡ, ಕಾಳಂಜೀಹಳ್ಳಿ ಸೋಮು, ಮಂಗೀಕುಪ್ಪೆ ಸೋಮಣ್ಣ, ಉಮಾಶಂಕರ್, ಸೇರಿದಂತೆಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.