ನವದೆಹಲಿ, ಡಿ. 13 : ಸತತ ವಾಯು ಮಾಲಿನ್ಯದಿಂದ ಕಂಗೆಟ್ಟಿರುವ ರಾಷ್ಟ್ರ ರಾಜಧಾನಿಗೆ ವರುಣದೇವ ಸ್ವಲ್ಪ ಸಮಾಧಾನ ತಂದಿದ್ದಾನೆ. ಗುರುವಾರ ರಾತ್ರಿ ಆಲಿಕಲ್ಲು ಸೇರಿದಂತೆ ಭಾರಿ ಮಳೆ ಸುರಿದಿದೆ.
ದಿಲ್ಲಿ, ನೋಯ್ಡಾ, ಗಾಜೀಯಾಬಾದ್, ಗುರುಗ್ರಾಮ್ ಗಳಲ್ಲಿ ಗರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಇದರಿಂದಾಗಿ ಶುಕ್ರವಾರ ಬೆಳಗ್ಗೆ ವಾಯು ಗುಣಮಟ್ಟ ಸ್ವಲ್ಪ ಚೇತರಿಕೆಯಾಗಿದೆ.
ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ಪ್ರಯಾಸಕರ ಪರಿಸ್ಥಿತಿಯಿದ್ದ ವಾಯು ಗುಣಮಟ್ಟ ಈಗ ಸ್ವಲ್ಪ ಸುಧಾರಣೆಯಾಗಿದೆ. ನೋಯ್ಡಾ ಮತ್ತು ಗುರುಗ್ರಾಮದಲ್ಲಿ ವಾಯು ಮಾಲಿನ್ಯ ಪ್ರಮಾಣ ಮಧ್ಯಮವಾಗಿದೆ.
ಕಳೆದ ಅಕ್ಟೋಬರ್ ನಿಂದ ರಾಷ್ಟ್ರ ರಾಜಧಾನಿಯ ಜನತೆ ವಾಯುಮಾಲಿನ್ಯದಿಂದ ಬಳಲುತ್ತಿದ್ದು, ಮುಂದೆ ಉತ್ತಮ ನಿರೀಕ್ಷೆಯಲ್ಲಿದ್ದಾರೆ.