ಮಂಡ್ಯ, ಏ. 8, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯದಲ್ಲಿ ಪುತ್ರ ನಿಖಿಲ್ ಗೆಲುವಿಗಾಗಿ, ಕುಮಾರಸ್ವಾಮಿ ಅಬ್ಬರದ ಪ್ರಚಾರದ ನಡುವೆ ಹೊಸ ಹೊಸ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ನಡುವೆ ಕೆ.ಆರ್.ಎಸ್.ನ ಖಾಸಗಿ ಹೋಟೆಲ್ ವೊಂದರಲ್ಲಿ ಸಿಎಂ ಹೆಚ್ಡಿಕೆ ಗೌಪ್ಯ ಸಭೆ ನಡೆಸಿದ್ದಾರೆ. ನಿನ್ನೆ ತಡರಾತ್ರಿಯೇ ಸಿಎಂ ಹೆಚ್.ಡಿ.ಕೆ., ಕೆ.ಆರ್.ಎಸ್. ಖಾಸಗಿ ಹೋಟೆಲ್ ನಲ್ಲಿ ಬಂದುಳಿದಿದ್ರು. ಹೀಗಾಗಿ ಇವತ್ತು ಬೆಳಗ್ಗೆಯಿಂದಲೇ ಮಂಡ್ಯ ಲೋಕಸಭಾ ಕ್ಷೇತ್ರದ ಶಾಸಕರು ಮತ್ತು ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದಾರೆ. ಆದ್ರೆ ಸಿಎಂ ತಂಗಿರುವ ಹೋಟೆಲ್ ಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಇನ್ನು ಈ ಸಭೆಯಲ್ಲಿ ಸಚಿವರಾದ ಜಿ.ಟಿ. ದೇವೇಗೌಡ, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಡಿ.ಸಿ.ತಮ್ಮಣ್ಣ ಸೇರಿದಂತೆ ಜಿಲ್ಲೆಯ ಆರು ಶಾಸಕರು ಮತ್ತು ಇಬ್ಬರು ಎಂ.ಎಲ್.ಸಿ.ಗಳು ಭಾಗವಹಿಸಿದ್ದಾರೆ. ಆದ್ರೆ ಮಳವಳ್ಳಿ ಶಾಸಕ ಕೆ. ಅನ್ನದಾನಿ ಮಾತ್ರಾ ಗೈರಾಗಿದ್ದಾರೆ.